<p><strong>ಬಂಟ್ವಾಳ</strong>: ‘ದೇಶದಲ್ಲಿ 1961ರಲ್ಲಿ ಆರಂಭಗೊಂಡ ಎಂಆರ್ಎಫ್ ಟೈರ್ಸ್ ಕಂಪನಿಯು ಗುಣಮಟ್ಟ ಮತ್ತು ಗ್ರಾಹಕ ಸ್ನೇಹಿ ಮನೋಭಾವದಿಂದ ಸತತ 39 ವರ್ಷಗಳಿಂದ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ’ ಎಂದು ಕಂಪನಿಯ ಹುಬ್ಬಳ್ಳಿ ವಲಯ ಮ್ಯಾನೇಜರ್ ಸಂದೀಪ್ ಎ. ಕುಗಾಜಿ ಹೇಳಿದರು.</p>.<p>ಇಲ್ಲಿನ ಮೆಲ್ಕಾರ್ ಸರ್ವಿಸ್ ರಸ್ತೆ ಬಳಿ ಸೋಮವಾರ ಆರಂಭಗೊಂಡ ಎಂಆರ್ಎಫ್ ಟೈರ್ ಮಳಿಗೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.</p>.<p>ಸಂಸ್ಥೆಗೆ 17 ವರ್ಷ ಆಟೊ ಮೊಬೈಲ್ ಕಸ್ಟಮರ್ ಪ್ರಶಸ್ತಿ ದೊರೆತಿದ್ದು, ದೇಶದಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ ಎಂದರು.</p>.<p>ಬಂಟ್ವಾಳ ತಾಲ್ಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್ ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಸಪಲ್ಯ, ಪಿಡಿಒ ಕೃಷ್ಣ ನಾಯ್ಕ್, ಉದ್ಯಮಿ ಅಬ್ದುಲ್ ಲತೀಫ್ ಕೋಟೆಕಾರ್, ಆಲಡ್ಕ ಮಸೀದಿ ಅಧ್ಯಕ್ಷ ಮೋನಾಕ್ಕ ಆಲಡ್ಕ, ಪಾಲುದಾರ ಮಹಮ್ಮದ್ ಸಿನಾನ್ ಮತ್ತಿತರರು ಇದ್ದರು.</p>.<p>ಇದೇ ವೇಳೆ ಡೀಲರ್ ಪತ್ರ ಹಸ್ತಾಂತರ ಮತ್ತು ಸನ್ಮಾನ ನಡೆಯಿತು. ಸಂಸ್ಥೆ ಪಾಲುದಾರ ಇಬ್ರಾಹಿಂ ಕೆ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶೀರ್ ಕುಂತೂರು ಕಾರ್ಯಕ್ರಮ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-29-1087785956</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಟ್ವಾಳ</strong>: ‘ದೇಶದಲ್ಲಿ 1961ರಲ್ಲಿ ಆರಂಭಗೊಂಡ ಎಂಆರ್ಎಫ್ ಟೈರ್ಸ್ ಕಂಪನಿಯು ಗುಣಮಟ್ಟ ಮತ್ತು ಗ್ರಾಹಕ ಸ್ನೇಹಿ ಮನೋಭಾವದಿಂದ ಸತತ 39 ವರ್ಷಗಳಿಂದ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ’ ಎಂದು ಕಂಪನಿಯ ಹುಬ್ಬಳ್ಳಿ ವಲಯ ಮ್ಯಾನೇಜರ್ ಸಂದೀಪ್ ಎ. ಕುಗಾಜಿ ಹೇಳಿದರು.</p>.<p>ಇಲ್ಲಿನ ಮೆಲ್ಕಾರ್ ಸರ್ವಿಸ್ ರಸ್ತೆ ಬಳಿ ಸೋಮವಾರ ಆರಂಭಗೊಂಡ ಎಂಆರ್ಎಫ್ ಟೈರ್ ಮಳಿಗೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.</p>.<p>ಸಂಸ್ಥೆಗೆ 17 ವರ್ಷ ಆಟೊ ಮೊಬೈಲ್ ಕಸ್ಟಮರ್ ಪ್ರಶಸ್ತಿ ದೊರೆತಿದ್ದು, ದೇಶದಲ್ಲಿ ನಾಲ್ಕನೇ ಸ್ಥಾನ ಗಳಿಸಿದೆ ಎಂದರು.</p>.<p>ಬಂಟ್ವಾಳ ತಾಲ್ಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್ ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರವೀಂದ್ರ ಸಪಲ್ಯ, ಪಿಡಿಒ ಕೃಷ್ಣ ನಾಯ್ಕ್, ಉದ್ಯಮಿ ಅಬ್ದುಲ್ ಲತೀಫ್ ಕೋಟೆಕಾರ್, ಆಲಡ್ಕ ಮಸೀದಿ ಅಧ್ಯಕ್ಷ ಮೋನಾಕ್ಕ ಆಲಡ್ಕ, ಪಾಲುದಾರ ಮಹಮ್ಮದ್ ಸಿನಾನ್ ಮತ್ತಿತರರು ಇದ್ದರು.</p>.<p>ಇದೇ ವೇಳೆ ಡೀಲರ್ ಪತ್ರ ಹಸ್ತಾಂತರ ಮತ್ತು ಸನ್ಮಾನ ನಡೆಯಿತು. ಸಂಸ್ಥೆ ಪಾಲುದಾರ ಇಬ್ರಾಹಿಂ ಕೆ.ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶೀರ್ ಕುಂತೂರು ಕಾರ್ಯಕ್ರಮ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260528-29-1087785956</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>