ಮಂಗಳೂರು: ಫೇಸ್ಬುಕ್ನಲ್ಲಿ ವಿವಿಧ ಚಾಲೆಂಜ್ಗಳು ಈಗ ಸದ್ದು ಮಾಡುತ್ತಿವೆ. ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್ ರೈ ಆರಂಭಿಸಿದ ಚಾಲೆಂಜ್ನ ಫೋಟೋಗಳು ಇದೀಗ ವೈರಲ್ ಆಗುತ್ತಿವೆ. ಮಿಥುನ್ ರೈ ಆರಂಭಿಸಿರುವ #ROADChallenge ಈಗ ವೈರಲ್ ಆಗಿದ್ದು, ಕೆಟ್ಟು ಹೋದ ರಸ್ತೆಗಳನ್ನು ದುರಸ್ತಿ ಮಾಡಿಸಿ ಎಂದು ಸಂಬಂಧಪಟ್ಟವರಿಗೆ ತಿಳಿಸುವುದೇ ಈ ಚಾಲೆಂಜ್ ಉದ್ದೇಶವಾಗಿದೆ.
ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಕಾಸರಗೋಡು, ಹಾಸನ ಸೇರಿದಂತೆ ವಿವಿಧ ಜಿಲ್ಲೆಗಳ ಜೊತೆ ಗಡಿಯನ್ನು ಹಂಚಿಕೊಂಡಿದೆ. ವಾಣಿಜ್ಯ ವಹಿವಾಟಿಗೆ ಖ್ಯಾತಿ ಪಡೆದಿರುವ ಜಿಲ್ಲೆಗೆ ಸಂಪರ್ಕಿಸುವ ರಸ್ತೆಗಳು ಸರಿ ಇಲ್ಲ ಎಂದು ಈ ಚಾಲೆಂಜ್ನಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#ROADChallenge ಹ್ಯಾಷ್ ಟ್ಯಾಗ್ ಬಳಸಿ ಮಾಡಿರುವ ಪೋಸ್ಟ್ಗಳನ್ನು ಹಲವರು ಶೇರ್ ಮಾಡುತ್ತಿದ್ದು, ಕಮೆಂಟ್ಗಳನ್ನು ಹಾಕುತ್ತಿದ್ದಾರೆ.
ಹಾಸನ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಬೆಂಗಳೂರು-ಮಂಗಳೂರು ರಸ್ತೆ ಸೇರಿದಂತೆ ವಿವಿಧ ರಸ್ತೆಗಳ ಚಿತ್ರಗಳನ್ನು ತೆಗೆದು #ROADChallenge ಎಂದು ಮಿಥುನ್ ರೈ ಹಾಕಿದ್ದಾರೆ. ರಸ್ತೆಗಳು ತುಂಬಾ ಹದಗೆಟ್ಟಿವೆ. ವಾಹನ ಸವಾರರು ಈ ರಸ್ತೆಯಲ್ಲಿ ಹೇಗೆ ಸಂಚಾರ ಮಾಡುತ್ತಾರೆ ಎಂಬುದು ಅವರಿಗೇ ಗೊತ್ತು. ಈ ರಸ್ತೆಗಳನ್ನು ದುರಸ್ತಿ ಮಾಡಿಸಿ ಎಂದು ಹಲವಾರು ಕಮೆಂಟ್ಗಳು ಬಂದಿವೆ.