ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೈಲದ ಮೇಲಿನ ತೆರಿಗೆ ಏರಿಸುವ ಮೂಲಕ ದೇಶದ ಜನರ ಮೇಲೆ ಬಿಜೆಪಿ ಸರ್ಕಾರ ತೆರಿಗೆ ದಾಳಿ ನಡೆಸುತ್ತಿದೆ. ತೈಲ ಬೆಲೆ ಏರಿಕೆಗೆ ಕೇಂದ್ರವು ಅಂತರರಾಷ್ಟ್ರೀಯ ಮಾರು ಕಟ್ಟೆಯ ನೆಪ ಹೇಳುತ್ತಿದೆ. ಇದೇ ಕಾರಣವಾಗಿದ್ದರೆ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನಗಳಲ್ಲಿ ಯಾಕೆ ಇಂಧನ ಬೆಲೆ ಹೆಚ್ಚಳವಾಗಿಲ್ಲ. ಜನರ ದಿಕ್ಕು ತಪ್ಪಿಸಲು ಸರ್ಕಾರ ಸುಳ್ಳು ಹೇಳುತ್ತಿದೆ’ ಎಂದರು.