ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡುಬಿದಿರೆ: ಪತ್ರಿಕಾ ವಿತರಕರಿಗೆ ದೀಪಾವಳಿ ಸನ್ಮಾನ

Last Updated 28 ಅಕ್ಟೋಬರ್ 2022, 7:12 IST
ಅಕ್ಷರ ಗಾತ್ರ

ಮೂಡುಬಿದಿರೆ: ದೀಪಾವಳಿ ಹಬ್ಬದ ಪ್ರಯುಕ್ತ ಪೈ ಏಜೆನ್ಸೀಸ್ ವತಿಯಿಂದ 13 ಮಂದಿ ಪತ್ರಿಕಾ ವಿತರಕರನ್ನು ಬುಧವಾರ ಗೌರವಿಸಲಾಯಿತು.

ವಕೀಲ ಕೆ.ಆರ್.ಪಂಡಿತ್ ಮಾತನಾಡಿ, ಪತ್ರಿಕಾ ವಿತರಣೆಯು ಅತ್ಯಂತ ಕ್ಲಿಷ್ಟಕರವಾದ ಕೆಲಸ. ಅದನ್ನು ದಶಕಗಳಿಂದ ವ್ಯವಸ್ಥಿತವಾಗಿ ಮುನ್ನಡೆಸಿ ಕ್ಲಪ್ತ ಸಮಯಕ್ಕೆ ಓದುಗರಿಗೆ ಮುಟ್ಟಿಸುವ ಕೆಲಸವನ್ನು ಬದ್ಧತೆಯನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ವಾಸ್ತುತಜ್ಞ ರಾಘವೇಂದ್ರ ಭಂಡಾರ್ಕರ್ ಅಧ್ಯಕ್ಷತೆ ವಹಿಸಿದ್ದರು. ದಯಾನಂದ ಪೈ, ಉಷಾ ಡಿ. ಪೈ ದಂಪತಿ ಪತ್ರಿಕಾ ವಿತರಕರಿಗೆ ರೇನ್‌ ಕೋಟ್, ನಗದು ಪುರಸ್ಕಾರ ನೀಡಿ ಗೌರವಿಸಿದರು. ಪುರಸಭಾ ಸದಸ್ಯೆ ಸ್ವಾತಿ ಪ್ರಭು, ಎಸ್ಎನ್ಎಂ ಪಾಲಿಟೆಕ್ನಿಕ್ ಉಪನ್ಯಾಸಕ ಸುರೇಶ್ ಭಂಡಾರಿ, ಪತ್ರಕರ್ತ ಬಿ.ಸೀತಾರಾಮ ಆಚಾರ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT