ಮೈಸೂರು ಅರಮನೆಯ ಆಸ್ಥಾನ ವಿದ್ವಾನ್ ಆಗಿದ್ದ ಎಂ.ಆರ್.ರಾಜಪ್ಪ ಮತ್ತು ಸರೋಜಮ್ಮ ದಂಪತಿ ಪುತ್ರ ಸಾಯಿನಾಥ್, ತಂದೆಯಿಂದಲೇ ಮೃದಂಗ ವಾದನದ ಪ್ರಾಥಮಿಕ ಪಾಠ ಕಲಿತವರು. 1984ರಲ್ಲಿ ಆಲ್ ಇಂಡಿಯಾ ರೇಡಿಯೊ ಮಂಗಳೂರಿನಲ್ಲಿ ಅವರು ಮೃದಂಗ ಕಲಾವಿದರಾಗಿ ನೇಮಕಗೊಂಡರು. ನಂತರ ಬೆಂಗಳೂರಿಗೆ ವರ್ಗಾವಣೆಗೊಂಡು, ‘ಎ’ ಗ್ರೇಡ್ ಕಲಾವಿದರಾಗಿ ಗುರುತಿಸಿಕೊಂಡರು. ಅವರು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಆಸ್ಥಾನ ವಿದ್ವಾನ್ ಆಗಿದ್ದರು.