184 ಮಂದಿಯಲ್ಲಿ ಕೇವಲ 13 ಮಂದಿ ಕರ್ನಾಟಕದ ಉದ್ಯೋಗಿಗಳನ್ನು ನೇಮಕ ಮಾಡಿದ್ದು, ಅದರಲ್ಲಿ ಉಡುಪಿ, ಕಾರ್ಕಳ, ಮಂಗಳೂರಿನ ತಲಾ ಒಬ್ಬ ಉದ್ಯೋಗಿಯನ್ನು ಸೇರಿಸಲಾಗಿದೆ. ಸ್ಥಳೀಯರ ಜಮೀನು ಪಡೆದು ತಲೆಯೆತ್ತಿರುವ ಎಂಆರ್ಪಿಎಲ್ ಸ್ಥಳೀಯರಿಗೆ ತಾರತಮ್ಯ ಎಸಗುತ್ತಿದೆ. ಸ್ಥಳೀಯ ಭತ್ತದ ಗದ್ದೆಗಳಿಗೆ ರಾಸಾಯನಿಕ ತ್ಯಾಜ್ಯ ಬಿಡುತ್ತಿದೆ. ಅದನ್ನು ಪ್ರಶ್ನಿಸುವ ಗೋಜಿಗೂ ಜಿಲ್ಲೆಯ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಈ ಬಗ್ಗೆ ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.