ಅತ್ಯುತ್ತಮ ಫರ್ನೇಸ್ ನಿರ್ವಹಣೆಗಾಗಿ 2019–20ನೇ ಸಾಲಿನ ಸಕ್ಷಂ ಪ್ರಶಸ್ತಿ ಹಾಗೂ 2021–22ನೇ ಸಾಲಿನ ನಾವೀನ್ಯ ರಿಫೈನರಿ ಪ್ರಶಸ್ತಿ, ಎಂಆರ್ಪಿಎಲ್ಗೆ ದೊರೆತಿದೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ರಾಮೇಶ್ವರ್ ತೇಲಿ ಅವರು ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಎಂಆರ್ಪಿಎಲ್ ಜಿಜಿಎಂ ನಂದಕುಮಾರ್ ವಿ, ಸಿಜಿಎಂ ಸುಧೀರ್ ಪೈ ಇದ್ದರು. ವಿವಿಧೆಡೆ ಪೆಟ್ರೊಕೆಮಿಕಲ್ಸ್ ಸಂಸ್ಥೆಗಳ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.