ಈ ವೇಳೆ ನಂಜುಂಡಸ್ವಾಮಿ ತಮ್ಮ ಕೈಲಿದ್ದ ಕಡತವನ್ನು ಎಸೆದು, ನಾನು ಬರುವುದೆ ಹೀಗೆ, ಯಾರಿಗೆ ಬೇಕಾದರೂ ದೂರು ನೀಡಿಕೊಳ್ಳಿ ಎಂದು ಸದಸ್ಯರ ವಿರುದ್ಧ ಅಗೌರವದಿಂದ ಮಾತನಾಡಿ ಸಭೆಯಿಂದ ಹೊರ ನಡೆದಿದ್ದರು. ಅವರ ಉದ್ದಟತನದ ವರ್ತನೆ ಖಂಡಿಸಿ, ಶಿಸ್ತು ಕ್ರಮ ಜರುಗಿಸಲು ನಿರ್ಣಯ ಕೈಗೊಂಡು ಮಾರುಕಟ್ಟೆ ಸಮಿತಿಯ ರಾಜ್ಯ ನಿರ್ದೇಶಕರಿಗೆ ಜನವರಿ 30 ದೂರು ನೀಡಲಾಗಿತ್ತು’ ಎಂದು ಸದಸ್ಯ ಕೆಂಪಣ್ಣ ಸುದ್ದಿಗಾರರಿಗೆ ತಿಳಿಸಿದರು.