<p>ಮೂಲ್ಕಿ: ಇಲ್ಲಿನ ಮೂಲ್ಕಿ– ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಮೃತ್ ಯೋಜನೆ ಕಾಮಗಾರಿಯಿಂದ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.</p>.<p>ಈ ಯೋಜನೆಯ ಆರಂಭದಲ್ಲಿ ಪೈಪ್ಲೈನ್ ಕಾಮಗಾರಿಗಾಗಿ ಹೆದ್ದಾರಿ ಬದಿಯಲ್ಲಿ ರಸ್ತೆಯ ಅಂಚನ್ನು ಅಗೆದು ಸೂಕ್ತರೀತಿಯಲ್ಲಿ ಮಣ್ಣು ಮುಚ್ಚಿರಲಿಲ್ಲ.</p>.<p>ಇದರಿಂದಾಗಿ ಚರಂಡಿಗಳಲ್ಲಿ ಮಣ್ಣು ತುಂಬಿ ಮಳೆ ನೀರು ಸರಿಯಾಗಿ ಹರಿಯದಂತಾಗಿದೆ. ಕಿನ್ನಿಗೋಳಿ ಬಸ್ ನಿಲ್ದಾಣದ ಮುಖ್ಯ ರಸ್ತೆ ಪಕ್ಕದಲ್ಲಿ ಹೂಳು ತುಂಬಿದೆ.</p>.<p>ಬೇರೆ ವಾಹನಗಳಿಗೆ ದಾರಿ ಬಿಡುವಾಗ ವಾಹನಗಳ ಚಕ್ರ ಮಣ್ಣಿನಲ್ಲಿ ಹೂತುಹೋಗುತ್ತವೆ. ಇದೀಗ ಹೊಸದಾಗಿ ನಾಲ್ಕು ದಿನಗಳಿಂದ ಪೈಪ್ಲೈನ್ಗಾಗಿ ರಸ್ತೆಯ ನಡುವೆಯೇ ಅಗೆದಿದ್ದು, ಗುಂಡಿಗೆ ಮಣ್ಣನ್ನು ಸರಿಯಾಗಿ ತುಂಬಿಸದೆ ವಾಹನ ಸಂಚರಿಸಲು ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಹೆಚ್ಚು ತೊಂದರೆಗೀಡಾಗುತ್ತಿದ್ದಾರೆ. ಯೋಜನೆಯ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ವಾಹನ ಚಾಲಕ ಜೀವನ್ ಶೆಟ್ಟಿ ಅಂಗರಗುಡ್ಡೆ ಅವರು ಆರೋಪಿಸಿದ್ದಾರೆ.</p>.<p>ಕೆಂಚನಕೆರೆ ತಿರುವಿನಿಂದ ಎಸ್.ಕೋಡಿಯವರೆಗೆ ಸುಮಾರು ಒಂದು ಕಿ.ಮೀ. ಅಂತರದಲ್ಲಿ ಹತ್ತುಕಡೆ ಈ ರೀತಿಯ ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದೆ ಎಂದು ಅವರು ದೂರಿದರು.</p>.<div><div class="bigfact-title">ತಕ್ಷಣ ದುರಸ್ತಿ ಕಾಮಗಾರಿ</div><div class="bigfact-description">ಯೋಜನೆಯ ಉಸ್ತುವಾರಿ ಮೋಹಿತ್ ಅವರು ಪ್ರತಿಕ್ರಿಯಿಸಿ, ಜನರಿಗೆ ಸ್ವಲ್ಪ ತೊಂದರೆ ಆಗಿರುವುದು ನಿಜ. ಹಾನಿಯಾಗಿರುವ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿ ದುರಸ್ತಿ ಮಾಡಿಕೊಡಲಾಗುವುದು. ಒಂದೊಂದು ಪ್ರದೇಶದಲ್ಲಿ ಕಾಮಗಾರಿ ಮುಗಿದ ತಕ್ಷಣ ದುರಸ್ತಿ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಲ್ಕಿ: ಇಲ್ಲಿನ ಮೂಲ್ಕಿ– ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅಮೃತ್ ಯೋಜನೆ ಕಾಮಗಾರಿಯಿಂದ ತೊಂದರೆ ಆಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.</p>.<p>ಈ ಯೋಜನೆಯ ಆರಂಭದಲ್ಲಿ ಪೈಪ್ಲೈನ್ ಕಾಮಗಾರಿಗಾಗಿ ಹೆದ್ದಾರಿ ಬದಿಯಲ್ಲಿ ರಸ್ತೆಯ ಅಂಚನ್ನು ಅಗೆದು ಸೂಕ್ತರೀತಿಯಲ್ಲಿ ಮಣ್ಣು ಮುಚ್ಚಿರಲಿಲ್ಲ.</p>.<p>ಇದರಿಂದಾಗಿ ಚರಂಡಿಗಳಲ್ಲಿ ಮಣ್ಣು ತುಂಬಿ ಮಳೆ ನೀರು ಸರಿಯಾಗಿ ಹರಿಯದಂತಾಗಿದೆ. ಕಿನ್ನಿಗೋಳಿ ಬಸ್ ನಿಲ್ದಾಣದ ಮುಖ್ಯ ರಸ್ತೆ ಪಕ್ಕದಲ್ಲಿ ಹೂಳು ತುಂಬಿದೆ.</p>.<p>ಬೇರೆ ವಾಹನಗಳಿಗೆ ದಾರಿ ಬಿಡುವಾಗ ವಾಹನಗಳ ಚಕ್ರ ಮಣ್ಣಿನಲ್ಲಿ ಹೂತುಹೋಗುತ್ತವೆ. ಇದೀಗ ಹೊಸದಾಗಿ ನಾಲ್ಕು ದಿನಗಳಿಂದ ಪೈಪ್ಲೈನ್ಗಾಗಿ ರಸ್ತೆಯ ನಡುವೆಯೇ ಅಗೆದಿದ್ದು, ಗುಂಡಿಗೆ ಮಣ್ಣನ್ನು ಸರಿಯಾಗಿ ತುಂಬಿಸದೆ ವಾಹನ ಸಂಚರಿಸಲು ತೊಂದರೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರು ಹೆಚ್ಚು ತೊಂದರೆಗೀಡಾಗುತ್ತಿದ್ದಾರೆ. ಯೋಜನೆಯ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ವಾಹನ ಚಾಲಕ ಜೀವನ್ ಶೆಟ್ಟಿ ಅಂಗರಗುಡ್ಡೆ ಅವರು ಆರೋಪಿಸಿದ್ದಾರೆ.</p>.<p>ಕೆಂಚನಕೆರೆ ತಿರುವಿನಿಂದ ಎಸ್.ಕೋಡಿಯವರೆಗೆ ಸುಮಾರು ಒಂದು ಕಿ.ಮೀ. ಅಂತರದಲ್ಲಿ ಹತ್ತುಕಡೆ ಈ ರೀತಿಯ ಅವೈಜ್ಞಾನಿಕವಾಗಿ ಕಾಮಗಾರಿ ನಡೆದಿದೆ ಎಂದು ಅವರು ದೂರಿದರು.</p>.<div><div class="bigfact-title">ತಕ್ಷಣ ದುರಸ್ತಿ ಕಾಮಗಾರಿ</div><div class="bigfact-description">ಯೋಜನೆಯ ಉಸ್ತುವಾರಿ ಮೋಹಿತ್ ಅವರು ಪ್ರತಿಕ್ರಿಯಿಸಿ, ಜನರಿಗೆ ಸ್ವಲ್ಪ ತೊಂದರೆ ಆಗಿರುವುದು ನಿಜ. ಹಾನಿಯಾಗಿರುವ ರಸ್ತೆಯನ್ನು ಕಾಂಕ್ರಿಟೀಕರಣ ಮಾಡಿ ದುರಸ್ತಿ ಮಾಡಿಕೊಡಲಾಗುವುದು. ಒಂದೊಂದು ಪ್ರದೇಶದಲ್ಲಿ ಕಾಮಗಾರಿ ಮುಗಿದ ತಕ್ಷಣ ದುರಸ್ತಿ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>