ಮೂಲ್ಕಿಗೆ ಅತೀ ಅಗತ್ಯ:ಕೊಲ್ನಾಡಿನ ಕೈಗಾರಿಕಾ ಪ್ರದೇಶದಲ್ಲಿ ಆಗಾಗ್ಗೆ ವರದಿಯಾಗುವ ಅಗ್ನಿ ಅವಘಡ, ಸಸಿಹಿತ್ಲು, ಕೊಳಚಿಕಂಬಳ, ಹೆಜಮಾಡಿ ಸಮುದ್ರ ಪ್ರದೇಶಗಳಲ್ಲಿನ ಅನಾಹುತಗಳಿಗೆ, ಪಕ್ಷಿಕೆರೆ ಪಂಜ, ಕರಿತೋಟ, ಪಾವಂಜೆ, ಕಟೀಲು, ಮಟ್ಟು, ಬಪ್ಪನಾಡು, ನಡಿಕುದ್ರು, ಕರ್ನಿರೆ, ಬಳ್ಕುಂಜೆ, ಅಜಾರು, ಎಕ್ಕಾರು ಪ್ರದೇಶದ ನಂದಿನಿ ಮತ್ತು ಶಾಂಭವಿ ನದಿ ಪ್ರದೇಶಗಳಲ್ಲಿ ನಡೆಯುವ ದುರ್ಘಟನೆಗಳಿಗೆ ಸಮೀಪದಲ್ಲೇ ಅಗ್ನಿ ಶಾಮಕ ಠಾಣೆ ಅತೀ ಅಗತ್ಯವಾಗಿದೆ. ಮೂಲ್ಕಿಯ ಹಲವು ಗುಡ್ಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿ ಅವಘಡಕ್ಕೂ ಸಹಕಾರಿಯಾಗಿದೆ.