ಪುಣ್ಕೆದಡಿಯ ನಿವಾಸಿ ಪಾಲ್ದೋಡಿ ಮನೆತನದ ಬಾಲಕೃಷ್ಣ ಶೆಟ್ಟಿ ಒಂದು ವರ್ಷದಿಂದ ಆರು ವರ್ಷದ ಬಸವನನ್ನು ನೋಡಿಕೊಳ್ಳುತ್ತಿದ್ದರು. ಶುಕ್ರವಾರ ಸಂಜೆ 4 ಗಂಟೆಗೆ ಮೇಯಲು ಕಟ್ಟಿದ್ದ ಬಸವನನ್ನು ದೈವಸ್ಥಾನದ ಬಳಿ ಇರುವ ಕೊಟ್ಟಿಗೆಯಲ್ಲಿ ಕಟ್ಟಿ ಹುಲ್ಲು ಹಾಕುತ್ತಿದ್ದಾಗ ಒಮ್ಮೆಲೇ ಗಲಿಬಿಲಿಗೊಂಡು, ಅವರ ಮೇಲೆ ಹಾಯ್ದು ತಲೆ ಮತ್ತು ಎದೆಗೆ ಬಲವಾಗಿ ತಿವಿದು ನೆಲಕ್ಕುರುಳಿಸಿ ಗಾಯಗೊಳಿಸಿದೆ.