ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರಾರ ದೈವಸ್ಥಾನದ ಬಸವ ತಿವಿದು ಚಾಕರಿ ವ್ಯಕ್ತಿ ಸಾವು

Last Updated 12 ಅಕ್ಟೋಬರ್ 2019, 11:22 IST
ಅಕ್ಷರ ಗಾತ್ರ

ಬಜ್ಪೆ: ಬಜ್ಪೆಗೆ ಹತ್ತಿರದ ಪೆರಾರ ಶ್ರೀ ಬ್ರಹ್ಮ ಬಲವಾಂಡಿ ದೈವಸ್ಥಾನದ ಬಸವ(ಹೋರಿ) ಸಾಕುತ್ತಿದ್ದ ಬಾಲಕೃಷ್ಣ ಶೆಟ್ಟಿ(52) ಎಂಬವರನ್ನು ಶುಕ್ರವಾರ ಸಂಜೆ ಹೋರಿ ತಿವಿದು ಕೊಂದಿದೆ.

ಪುಣ್ಕೆದಡಿಯ ನಿವಾಸಿ ಪಾಲ್ದೋಡಿ ಮನೆತನದ ಬಾಲಕೃಷ್ಣ ಶೆಟ್ಟಿ ಒಂದು ವರ್ಷದಿಂದ ಆರು ವರ್ಷದ ಬಸವನನ್ನು ನೋಡಿಕೊಳ್ಳುತ್ತಿದ್ದರು. ಶುಕ್ರವಾರ ಸಂಜೆ 4 ಗಂಟೆಗೆ ಮೇಯಲು ಕಟ್ಟಿದ್ದ ಬಸವನನ್ನು ದೈವಸ್ಥಾನದ ಬಳಿ ಇರುವ ಕೊಟ್ಟಿಗೆಯಲ್ಲಿ ಕಟ್ಟಿ ಹುಲ್ಲು ಹಾಕುತ್ತಿದ್ದಾಗ ಒಮ್ಮೆಲೇ ಗಲಿಬಿಲಿಗೊಂಡು, ಅವರ ಮೇಲೆ ಹಾಯ್ದು ತಲೆ ಮತ್ತು ಎದೆಗೆ ಬಲವಾಗಿ ತಿವಿದು ನೆಲಕ್ಕುರುಳಿಸಿ ಗಾಯಗೊಳಿಸಿದೆ.

ಗಂಭೀರ ಗಾಯಗೊಂಡ ಶೆಟ್ಟಿಯವರಿಗೆ ಬಜ್ಪೆ ಮತ್ತು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ ಮೃತಪಟ್ಟರು. ಅವರ ಸಂಬಂಧಿ ಯೋಗೀಶ್ ಆಳ್ವ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT