<p><strong>ಮಂಗಳೂರು:</strong> ಶಿಕ್ಷಣ ಪಡೆದ ಹೆಣ್ಣು ಸಮಾಜದ ಸವಾಲುಗಳನ್ನು ಧೈರ್ಯದಿಂದ ಎದುರಿಸಬಲ್ಲಳು. ಕುಟುಂಬದ ಹಾಗೂ ಹೊರಗಿನ ಗುಲಾಮಗಿರಿಯನ್ನು ಮೆಟ್ಟಿನಿಲ್ಲಬಲ್ಲಳು. ಹೀಗಾಗಿ ಮಹಿಳೆಯ ಸಾಮರ್ಥ್ಯಕ್ಕೆ ಶಿಕ್ಷಣ ಇಂಧನದಂತೆ ಕೆಲಸ ಮಾಡುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅಭಿಪ್ರಾಯಪಟ್ಟರು.</p>.<p>ನಗರದ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಜೊತೆ ಅವರು ಮಾತನಾಡಿದರು.</p>.<p>'ತಪ್ಪು ಮಾಡದವರು ಯಾರೂ ಇಲ್ಲ. ಆದರೆ ಅವಿವೇಕದಿಂದ ಯಾರ ಬಲೆಗೂ ಬೀಳಬಾರದು. ಸೈಬರ್ ಅಪರಾಧದಂಥ ಮೋಸದ ಜಾಲದ ಬಗ್ಗೆ ಎಚ್ಚರದಿಂದಿರಬೇಕು. ವಯಸ್ಸು ಮತ್ತು ಪರಿಸರದ ಕಾರಣದಿಂದ ಹಾಗೇನಾದರೂ ತಿಳಿಯದೇ ತಪ್ಪು ಆದರೂ ಅದರ ಪರಿಣಾಮದ ಕುರಿತು ಆಲೋಚಿಸಿ ಧೈರ್ಯಗೆಡಬಾರದು' ಎಂದು ನಾಗಲಕ್ಷ್ಮಿ ಹೇಳಿದರು.</p>.<p>‘ಮಹಿಳೆಗೆ ವ್ಯಕ್ತಿತ್ವದ ತೇಜೋವಧೆಗಿಂತ ಅಸಹನೀಯ ವಿಷಯ ಬೇರೆ ಇಲ್ಲ. ಹಾಗೆ ಮಾಡುವವರ ಎದುರು ಸೆಟೆದು ನಿಂತು ಬದುಕಲು ಭರವಸೆಯೇ ಬೆಳಕಾಗಬೇಕು. ಆತ್ಮವಿಶ್ವಾಸವೇ ಆಕೆಯ ಒಡವೆ ಆಗಬೇಕು. ಆ ಮೂಲಕ ಇದ್ದು ಜೈಸಲು ಕಲಿಯಬೇಕು. ಭಯ ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು’ ಎಂದರು.</p>.<p>‘ಹೆಣ್ಣಿಗೆ ಆರ್ಥಿಕ ಸ್ಚಾವಲಂಬನೆ ಮುಖ್ಯ. ಗುಲಾಮಗಿರಿಯ ಬದುಕಿನಲ್ಲಿ ಸಿಲುಕಿರುವ ಕೆಲವರಿಗೆ ಆರೋಗ್ಯ ಸಮಸ್ಯೆ ಕಾಡಿದರೆ ಔಷಧಿಗೂ ಮನೆಯಲ್ಲಿ ಹಣ ಕೊಡುವುದಿಲ್ಲ. ಆದ್ದರಿಂದ ಸಮಯವನ್ನು ಡಿಜಿಟಲ್ ಲೋಕದಲ್ಲಿ ಕಳೆಯುವುದಕ್ಕಿಂತ ಓದಿಗಾಗಿ ಬಳಸಿಕೊಂಡು ಸ್ವಂತ ಕಾಲಮೇಲೆ ನಿಲ್ಲುವ ಪ್ರಯತ್ನ ಮಾಡಬೇಕು. ಸಮಯವನ್ನು ಓದಲು ಬಳಸಿಕೊಳ್ಳಬೇಕೇ ಹೊರತು ವ್ಯರ್ಥ ಮಾಡಬಾರದು’ ಎಂದು ಅವರು ಅಭಿಪ್ರಾಯಪಟ್ಟರು.</p>.<p>ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷೆ ರಾಜಲಕ್ಷ್ಮಿ, ಪ್ರಾಂಶುಪಾಲ ಗೋಪಾಲಕೃಷ್ಣ, ಗ್ರಂಥಪಾಲಕಿ ಶಿಲ್ಪಾ, ಆಂತರಿಕ ಗುಣಮಟ್ಟ ಭರವಸೆ ಕೋಶದ ಮಂಜುಳಾ ಮಲ್ಯ, ಉಪನ್ಯಾಸಕಿ ಜಯಶ್ರೀ, ವಿಜಯಲಕ್ದ್ಮಿ ಮತ್ತು ಮೀನಾಕ್ಷಿ ಪಾಲ್ಗೊಂಡಿದ್ದರು.</p>.<div><blockquote>ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ತಾಯಿ–ಮಗು ಕೊಠಡಿಯ ತೊಟ್ಟಿಲು ತೆಗೆಯಲಾಗಿದೆ. ಅದನ್ನು ಮತ್ತೆ ಅಳವಡಿಸಲು ಬಸ್ಗಳಲ್ಲಿ ಸಹಾಯವಾಣಿ ಸಂಖ್ಯೆ ನಮೂದಿಸಲು ಸೂಚಿಸಲಾಗಿದೆ.</blockquote><span class="attribution">ಡಾ.ನಾಗಲಕ್ಷ್ಮಿ ಚೌಧರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ</span></div>.<p><strong>ಇಷ್ಟ ಇಲ್ಲದೆ ಮದುವೆ ಆಗಬೇಡಿ</strong> </p><p>ಮನೆಯವರ ಒತ್ತಾಯಕ್ಕೆ ಮದುವೆಯಾಗಬೇಡಿ ವೈವಾಹಿಕ ಜೀವನ ಇಷ್ಟ ಇದ್ದರೆ ಮಾತ್ರ ಒಪ್ಪಿಕೊಳ್ಳಿ ಎಂದು ಹೇಳಿದ ನಾಗಲಕ್ಷ್ಮಿ ಚೌಧರಿ ಸ್ವತಂತ್ರವಾಗಿ ಬದುಕಬೇಕು ಎಂದೆನಿಸಿದರೆ ಆ ದಾರಿಯನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ‘ನಾನು ಜನಿಸಿದ ಮಾರೇನಹಳ್ಳಿಯಲ್ಲಿ ಹೆಣ್ಣು ಮೈ ನೆರೆದರೆ ಮದುವೆಯ ಆಲೋಚನೆ ಮಾಡುತ್ತಿದ್ದರು. ಆದರೆ ನನ್ನ ತಂದೆ ನನಗೆ ಶಿಕ್ಷಣ ಕೊಡಿಸಲು ಮತ್ತು ಸ್ವಾವಲಂಬಿಯಾಗಿಸಲು ಆದ್ಯತೆ ನೀಡಿದರು. ಅದರಿಂದಾಗಿ ನನ್ನ ಬದುಕಿನ ಚಿತ್ರಣವೇ ಬದಲಾಯಿತು' ಎಂದು ಅವರು ವಿವರಿಸಿದರು.</p>.<p><strong>ಸಮಸ್ಯೆ ಹೇಳಿಕೊಳ್ಳದ ಮಹಿಳೆಯರು</strong> </p><p>ಮಂಗಳೂರಿನ ಸ್ಟೇಟ್ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ನಾಗಲಕ್ಷ್ಮಿ ಚೌಧರಿ ಅವರ ಮುಂದೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಮೀನು ಮಾರಾಟ ಮಾಡುವ ಮಹಿಳೆಯರು ಹಿಂಜರಿದರು. ಹಲವರ ಬಳಿಗೆ ಹೋಗಿ ಸಮಸ್ಯೆ ಹೇಳಿಕೊಳ್ಳಿ ಎಂದು ನಾಗಲಕ್ಷ್ಮಿಯವರೂ ಜೊತೆಗಿದ್ದ ಅಧಿಕಾರಿಗಳೂ ಕೋರಿಕೊಂಡರು. ಕೆಲವರು ಅವರ ಕಡೆಗೆ ನೋಡಲೇ ಇಲ್ಲ. ಇನ್ನು ಕೆಲವರು ಅಧ್ಯಕ್ಷರಿದ್ದಾರೆ ಅವರ ಬಳಿ ಕೇಳಿ ಎಂದರು. ತುಂಬ ಹೊತ್ತು ಕಳೆದ ನಂತರ ಕೆಲವರು ಮೀನು ಮಾರುಕಟ್ಟೆಯನ್ನು ಸೆಂಟ್ರಲ್ ಮಾರುಕಟ್ಟೆಗೆ ಸ್ಥಳಾಂತರಿಸಬಾರದು ಎಂದರು. ಸೆಂಟ್ರಲ್ ಮಾರುಕಟ್ಟೆಯಲ್ಲಿ ಸಮರ್ಪಕ ಸ್ಥಳಾವಕಾಶ ಇಲ್ಲ. ಅಲ್ಲಿ ಹೆಚ್ಚು ಬಾಡಿಗೆ ಇರಬಹುದು ಅದನ್ನು ಪಾವತಿ ಮಾಡಲು ನಮ್ಮಿಂದ ಸಾಧ್ಯವಿಲ್ಲ ಎಂದರು. ಸ್ಟೇಟ್ ಬ್ಯಾಂಕ್ ಮಾರುಕಟ್ಟೆಯ ಚಾವಣಿ ಸೋರುತ್ತಿದ್ದು ಸರಿ ಮಾಡಲು ತಿಳಿಸಿದ್ದೇನೆ. ಅದಕ್ಕೆ ಸಂಬಂಧಪಟ್ಟವರು ಒಪ್ಪಿಕೊಂಡಿದ್ದಾರೆ. ಇಲ್ಲಿ ಕಳ್ಳರ ಕಾಟವಿದ್ದು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದರು. ಪತ್ರಕರ್ತರ ಜೊತೆ ಮಾತನಾಡಿದ ನಾಗಲಕ್ಷ್ಮಿ ಮಾರುಕಟ್ಟೆಯಲ್ಲಿ ಮಹಿಳೆಯರ ಸಮಸ್ಯೆಗಳನ್ನು ಕಂಡಿದ್ದೇನೆ. ಜಿಲ್ಲಾಧಿಕಾರಿ ಜೊತೆ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಲಾಗುವುದು. ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಲಾಗುವುದು ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಶಿಕ್ಷಣ ಪಡೆದ ಹೆಣ್ಣು ಸಮಾಜದ ಸವಾಲುಗಳನ್ನು ಧೈರ್ಯದಿಂದ ಎದುರಿಸಬಲ್ಲಳು. ಕುಟುಂಬದ ಹಾಗೂ ಹೊರಗಿನ ಗುಲಾಮಗಿರಿಯನ್ನು ಮೆಟ್ಟಿನಿಲ್ಲಬಲ್ಲಳು. ಹೀಗಾಗಿ ಮಹಿಳೆಯ ಸಾಮರ್ಥ್ಯಕ್ಕೆ ಶಿಕ್ಷಣ ಇಂಧನದಂತೆ ಕೆಲಸ ಮಾಡುತ್ತದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅಭಿಪ್ರಾಯಪಟ್ಟರು.</p>.<p>ನಗರದ ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಜೊತೆ ಅವರು ಮಾತನಾಡಿದರು.</p>.<p>'ತಪ್ಪು ಮಾಡದವರು ಯಾರೂ ಇಲ್ಲ. ಆದರೆ ಅವಿವೇಕದಿಂದ ಯಾರ ಬಲೆಗೂ ಬೀಳಬಾರದು. ಸೈಬರ್ ಅಪರಾಧದಂಥ ಮೋಸದ ಜಾಲದ ಬಗ್ಗೆ ಎಚ್ಚರದಿಂದಿರಬೇಕು. ವಯಸ್ಸು ಮತ್ತು ಪರಿಸರದ ಕಾರಣದಿಂದ ಹಾಗೇನಾದರೂ ತಿಳಿಯದೇ ತಪ್ಪು ಆದರೂ ಅದರ ಪರಿಣಾಮದ ಕುರಿತು ಆಲೋಚಿಸಿ ಧೈರ್ಯಗೆಡಬಾರದು' ಎಂದು ನಾಗಲಕ್ಷ್ಮಿ ಹೇಳಿದರು.</p>.<p>‘ಮಹಿಳೆಗೆ ವ್ಯಕ್ತಿತ್ವದ ತೇಜೋವಧೆಗಿಂತ ಅಸಹನೀಯ ವಿಷಯ ಬೇರೆ ಇಲ್ಲ. ಹಾಗೆ ಮಾಡುವವರ ಎದುರು ಸೆಟೆದು ನಿಂತು ಬದುಕಲು ಭರವಸೆಯೇ ಬೆಳಕಾಗಬೇಕು. ಆತ್ಮವಿಶ್ವಾಸವೇ ಆಕೆಯ ಒಡವೆ ಆಗಬೇಕು. ಆ ಮೂಲಕ ಇದ್ದು ಜೈಸಲು ಕಲಿಯಬೇಕು. ಭಯ ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು’ ಎಂದರು.</p>.<p>‘ಹೆಣ್ಣಿಗೆ ಆರ್ಥಿಕ ಸ್ಚಾವಲಂಬನೆ ಮುಖ್ಯ. ಗುಲಾಮಗಿರಿಯ ಬದುಕಿನಲ್ಲಿ ಸಿಲುಕಿರುವ ಕೆಲವರಿಗೆ ಆರೋಗ್ಯ ಸಮಸ್ಯೆ ಕಾಡಿದರೆ ಔಷಧಿಗೂ ಮನೆಯಲ್ಲಿ ಹಣ ಕೊಡುವುದಿಲ್ಲ. ಆದ್ದರಿಂದ ಸಮಯವನ್ನು ಡಿಜಿಟಲ್ ಲೋಕದಲ್ಲಿ ಕಳೆಯುವುದಕ್ಕಿಂತ ಓದಿಗಾಗಿ ಬಳಸಿಕೊಂಡು ಸ್ವಂತ ಕಾಲಮೇಲೆ ನಿಲ್ಲುವ ಪ್ರಯತ್ನ ಮಾಡಬೇಕು. ಸಮಯವನ್ನು ಓದಲು ಬಳಸಿಕೊಳ್ಳಬೇಕೇ ಹೊರತು ವ್ಯರ್ಥ ಮಾಡಬಾರದು’ ಎಂದು ಅವರು ಅಭಿಪ್ರಾಯಪಟ್ಟರು.</p>.<p>ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷೆ ರಾಜಲಕ್ಷ್ಮಿ, ಪ್ರಾಂಶುಪಾಲ ಗೋಪಾಲಕೃಷ್ಣ, ಗ್ರಂಥಪಾಲಕಿ ಶಿಲ್ಪಾ, ಆಂತರಿಕ ಗುಣಮಟ್ಟ ಭರವಸೆ ಕೋಶದ ಮಂಜುಳಾ ಮಲ್ಯ, ಉಪನ್ಯಾಸಕಿ ಜಯಶ್ರೀ, ವಿಜಯಲಕ್ದ್ಮಿ ಮತ್ತು ಮೀನಾಕ್ಷಿ ಪಾಲ್ಗೊಂಡಿದ್ದರು.</p>.<div><blockquote>ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ತಾಯಿ–ಮಗು ಕೊಠಡಿಯ ತೊಟ್ಟಿಲು ತೆಗೆಯಲಾಗಿದೆ. ಅದನ್ನು ಮತ್ತೆ ಅಳವಡಿಸಲು ಬಸ್ಗಳಲ್ಲಿ ಸಹಾಯವಾಣಿ ಸಂಖ್ಯೆ ನಮೂದಿಸಲು ಸೂಚಿಸಲಾಗಿದೆ.</blockquote><span class="attribution">ಡಾ.ನಾಗಲಕ್ಷ್ಮಿ ಚೌಧರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ</span></div>.<p><strong>ಇಷ್ಟ ಇಲ್ಲದೆ ಮದುವೆ ಆಗಬೇಡಿ</strong> </p><p>ಮನೆಯವರ ಒತ್ತಾಯಕ್ಕೆ ಮದುವೆಯಾಗಬೇಡಿ ವೈವಾಹಿಕ ಜೀವನ ಇಷ್ಟ ಇದ್ದರೆ ಮಾತ್ರ ಒಪ್ಪಿಕೊಳ್ಳಿ ಎಂದು ಹೇಳಿದ ನಾಗಲಕ್ಷ್ಮಿ ಚೌಧರಿ ಸ್ವತಂತ್ರವಾಗಿ ಬದುಕಬೇಕು ಎಂದೆನಿಸಿದರೆ ಆ ದಾರಿಯನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು. ‘ನಾನು ಜನಿಸಿದ ಮಾರೇನಹಳ್ಳಿಯಲ್ಲಿ ಹೆಣ್ಣು ಮೈ ನೆರೆದರೆ ಮದುವೆಯ ಆಲೋಚನೆ ಮಾಡುತ್ತಿದ್ದರು. ಆದರೆ ನನ್ನ ತಂದೆ ನನಗೆ ಶಿಕ್ಷಣ ಕೊಡಿಸಲು ಮತ್ತು ಸ್ವಾವಲಂಬಿಯಾಗಿಸಲು ಆದ್ಯತೆ ನೀಡಿದರು. ಅದರಿಂದಾಗಿ ನನ್ನ ಬದುಕಿನ ಚಿತ್ರಣವೇ ಬದಲಾಯಿತು' ಎಂದು ಅವರು ವಿವರಿಸಿದರು.</p>.<p><strong>ಸಮಸ್ಯೆ ಹೇಳಿಕೊಳ್ಳದ ಮಹಿಳೆಯರು</strong> </p><p>ಮಂಗಳೂರಿನ ಸ್ಟೇಟ್ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ನಾಗಲಕ್ಷ್ಮಿ ಚೌಧರಿ ಅವರ ಮುಂದೆ ಸಮಸ್ಯೆಗಳನ್ನು ಹೇಳಿಕೊಳ್ಳಲು ಮೀನು ಮಾರಾಟ ಮಾಡುವ ಮಹಿಳೆಯರು ಹಿಂಜರಿದರು. ಹಲವರ ಬಳಿಗೆ ಹೋಗಿ ಸಮಸ್ಯೆ ಹೇಳಿಕೊಳ್ಳಿ ಎಂದು ನಾಗಲಕ್ಷ್ಮಿಯವರೂ ಜೊತೆಗಿದ್ದ ಅಧಿಕಾರಿಗಳೂ ಕೋರಿಕೊಂಡರು. ಕೆಲವರು ಅವರ ಕಡೆಗೆ ನೋಡಲೇ ಇಲ್ಲ. ಇನ್ನು ಕೆಲವರು ಅಧ್ಯಕ್ಷರಿದ್ದಾರೆ ಅವರ ಬಳಿ ಕೇಳಿ ಎಂದರು. ತುಂಬ ಹೊತ್ತು ಕಳೆದ ನಂತರ ಕೆಲವರು ಮೀನು ಮಾರುಕಟ್ಟೆಯನ್ನು ಸೆಂಟ್ರಲ್ ಮಾರುಕಟ್ಟೆಗೆ ಸ್ಥಳಾಂತರಿಸಬಾರದು ಎಂದರು. ಸೆಂಟ್ರಲ್ ಮಾರುಕಟ್ಟೆಯಲ್ಲಿ ಸಮರ್ಪಕ ಸ್ಥಳಾವಕಾಶ ಇಲ್ಲ. ಅಲ್ಲಿ ಹೆಚ್ಚು ಬಾಡಿಗೆ ಇರಬಹುದು ಅದನ್ನು ಪಾವತಿ ಮಾಡಲು ನಮ್ಮಿಂದ ಸಾಧ್ಯವಿಲ್ಲ ಎಂದರು. ಸ್ಟೇಟ್ ಬ್ಯಾಂಕ್ ಮಾರುಕಟ್ಟೆಯ ಚಾವಣಿ ಸೋರುತ್ತಿದ್ದು ಸರಿ ಮಾಡಲು ತಿಳಿಸಿದ್ದೇನೆ. ಅದಕ್ಕೆ ಸಂಬಂಧಪಟ್ಟವರು ಒಪ್ಪಿಕೊಂಡಿದ್ದಾರೆ. ಇಲ್ಲಿ ಕಳ್ಳರ ಕಾಟವಿದ್ದು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದರು. ಪತ್ರಕರ್ತರ ಜೊತೆ ಮಾತನಾಡಿದ ನಾಗಲಕ್ಷ್ಮಿ ಮಾರುಕಟ್ಟೆಯಲ್ಲಿ ಮಹಿಳೆಯರ ಸಮಸ್ಯೆಗಳನ್ನು ಕಂಡಿದ್ದೇನೆ. ಜಿಲ್ಲಾಧಿಕಾರಿ ಜೊತೆ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಲಾಗುವುದು. ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಲಾಗುವುದು ಎಂದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>