<p><strong>ಬೆಳ್ತಂಗಡಿ:</strong> ‘ಭಕ್ತಿ ಇದ್ದಲ್ಲಿ ಮುಕ್ತಿ ಪ್ರಾಪ್ತವಾಗುತ್ತದೆ. ಸೂರ್ಯ ದೇವರ ಶಕ್ತಿ ಪ್ರತ್ಯಕ್ಷವಾಗಿರುವುದರಿಂದ ಅದು ಶ್ರೇಷ್ಠ ಮಾತ್ರವಲ್ಲದೆ ಚೈತನ್ಯಕರವೂ ಆಗಿದೆ’ ಎಂದು ಮೂಡುಬಿದಿರೆಯ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.</p>.<p>ನಾರಾವಿ ಸೂರ್ಯನಾರಾಯಣ ದೇವರ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.</p>.<p>‘ಸೂರ್ಯದೇವ ನಮ್ಮೆಲ್ಲರ ಆರೋಗ್ಯ ಕಾಂತಿಗೆ, ಕೀರ್ತಿಗೆ ಕಾರಣ. ನಮ್ಮ ಸಮಾಜದ 16 ಸಮುದಾಯಗಳಿಗೆ ಸೇವೆ ಮಾಡಲು ಅವಕಾಶವಿರುವುದು ಜಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ. ಶಾಲೆಗಳು ಇರದ ಕಾಲದಲ್ಲಿ ದೇವಸ್ಥಾನಗಳು ಸಂಸ್ಕಾರ ಕೇಂದ್ರಗಳಾಗಿದ್ದವು’ ಎಂದರು.</p>.<p>ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಹೆಗ್ಡೆ ಅಧ್ಯಕತೆ ವಹಿಸಿದ್ದರು.</p>.<p>ಮಾಜಿ ಸಚಿವರಾದ ವಿನಯಕುಮಾರ ಸೊರಕೆ, ಅಭಯಚಂದ್ರ ಜೈನ್, ವಕೀಲೆ ಶ್ವೇತಾ ಜೈನ್, ರಘುರಾಮ ಶೆಟ್ಟಿ ಮಾಳ, ನಿವೃತ್ತ ಅಧ್ಯಾಪಕ ಎಂ.ಕೆ.ಅರಿಗ, ಪೆರಾಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ, ಪ್ರವೀಣ ಕುಮಾರ್ ಜೈನ್, ಪ್ರವೀಣ ಪಿಂಟೋ, ಸಂಜೀವ ಶೆಟ್ಟಿ, ನಿವೃತ್ತ ಪೋಲಿಸ್ ಅಧಿಕಾರಿ ಪೀತಾಂಬರ ಹೆರಾಜೆ, ಪೆರಾಡಿ ಸಿ.ಎ.ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ, ಸದಾನಂದ ಪೂಜಾರಿ, ದಿನೇಶ್ ಶೆಟ್ಟಿ, ಚಂದ್ರಶೇಖರ್ ಜಾರೋಡಿ, ನಾರಾವಿ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಕಿಶೋರ್ ಕುಮಾರ್ ಕಂಠಾವು, ದಿನೇಶ್ ಶೆಟ್ಟಿ ಮಾಳ, ದೇವಳದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಹಾಜರಿದ್ದರು.</p>.<p>ಧರಣೇಂದ್ರ ಜೈನ್ ಸ್ವಾಗತಿಸಿದರು. ಸತೀಶ್ ಹೊಸ್ಮಾರ್ ನಿರೂಪಿಸಿದರು.</p>.<p>ಆನೆಗುಂದಿ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಬೆಳಿಗ್ಗೆ ದೇವಳಕ್ಕೆ ಭೇಟಿ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯೋಗಾಸನ ನೃತ್ಯ, ಮಹಿಳಾ ಕುಣಿತ ಭಜನೆ ನಡೆದವು.</p>.<p> ಇಂದಿನ ಕಾರ್ಯಕ್ರಮ: ಬೆಳಿಗ್ಗೆ ಗಂಟೆ 8ರಿಂದ ಗಣಯಾಗ ತತ್ವ ಹೋಮ ಗಾಯತ್ರಿ ಮಂತ್ರ, ಬ್ರಹ್ಮಕಲಶದ ಮಂಡಲ ರಚನೆ, ವಸಂತ ಪೂಜೆ, ಮಹಾಪೂಜೆ, ದೀಪಬಲಿ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಮಹಿಳಾ ಧಾರ್ಮಿಕ ಸಭೆ ನಡೆಯಲಿದ್ದು, ಲಾವಣ್ಯ ಬಲ್ಲಾಳ ಜೈನ್, ಮಲ್ಲಿಕಾ ಯಶವಂತ ಶೆಟ್ಟಿ, ಸುಜಿತಾ ವಿ ಬಂಗೇರ ಭಾಗವಹಿಸಲಿದ್ದಾರೆ.</p>.<p>ಸಂಜೆ 6.30ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಶಾಸಕರಾದ ಉಮಾನಾಥ ಕೋಟ್ಯಾನ್, ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಬಿ. ರಮಾನಾಥ ರೈ ಭಾಗವಹಿಸುವರು. ಹೊಸ್ಮಾರಿನ ಎಂ.ಜೆ. ಸ್ಟೆಪ್ ಆಪ್ ಡ್ಯಾನ್ಸ್ ಕ್ಲಾಸ್ ಹೊಸ್ಮಾರ್ ಅವರಿಂದ ಜಾನಪದ ಹಾಗೂ ಸೆಮಿ ಕ್ಲಾಸಿಕಲ್ ಡ್ಯಾನ್ಸ್, ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.</p>.<div><blockquote>ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಲಕ್ಷಾಂತರ ನಮ್ಮ ಬಂಧುಗಳು ಅಲ್ಲಿದ್ದಾರೆ. ಬ್ರಹ್ಮಕಲಶೋತ್ಸವದಲ್ಲಿ ಅಲ್ಲಿನವರ ಸುರಕ್ಷತೆಗೆ ಸೂರ್ಯದೇವರಲ್ಲಿ ಪ್ರಾರ್ಥಿಸೋಣ. ಶಾಂತಿಯ ವಾತಾವರಣ ನಿರ್ಮಾಣವಾಗಿ ಸಾತ್ವಿಕ ಶಕ್ತಿ ವಿಜೃಂಭಿಸಲಿ </blockquote><span class="attribution">ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೂಡುಬಿದಿರೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳ್ತಂಗಡಿ:</strong> ‘ಭಕ್ತಿ ಇದ್ದಲ್ಲಿ ಮುಕ್ತಿ ಪ್ರಾಪ್ತವಾಗುತ್ತದೆ. ಸೂರ್ಯ ದೇವರ ಶಕ್ತಿ ಪ್ರತ್ಯಕ್ಷವಾಗಿರುವುದರಿಂದ ಅದು ಶ್ರೇಷ್ಠ ಮಾತ್ರವಲ್ಲದೆ ಚೈತನ್ಯಕರವೂ ಆಗಿದೆ’ ಎಂದು ಮೂಡುಬಿದಿರೆಯ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.</p>.<p>ನಾರಾವಿ ಸೂರ್ಯನಾರಾಯಣ ದೇವರ ಬ್ರಹ್ಮಕಲಶೋತ್ಸವದ ಮೂರನೇ ದಿನವಾದ ಮಂಗಳವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.</p>.<p>‘ಸೂರ್ಯದೇವ ನಮ್ಮೆಲ್ಲರ ಆರೋಗ್ಯ ಕಾಂತಿಗೆ, ಕೀರ್ತಿಗೆ ಕಾರಣ. ನಮ್ಮ ಸಮಾಜದ 16 ಸಮುದಾಯಗಳಿಗೆ ಸೇವೆ ಮಾಡಲು ಅವಕಾಶವಿರುವುದು ಜಾತ್ರೆಯಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ. ಶಾಲೆಗಳು ಇರದ ಕಾಲದಲ್ಲಿ ದೇವಸ್ಥಾನಗಳು ಸಂಸ್ಕಾರ ಕೇಂದ್ರಗಳಾಗಿದ್ದವು’ ಎಂದರು.</p>.<p>ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಹೆಗ್ಡೆ ಅಧ್ಯಕತೆ ವಹಿಸಿದ್ದರು.</p>.<p>ಮಾಜಿ ಸಚಿವರಾದ ವಿನಯಕುಮಾರ ಸೊರಕೆ, ಅಭಯಚಂದ್ರ ಜೈನ್, ವಕೀಲೆ ಶ್ವೇತಾ ಜೈನ್, ರಘುರಾಮ ಶೆಟ್ಟಿ ಮಾಳ, ನಿವೃತ್ತ ಅಧ್ಯಾಪಕ ಎಂ.ಕೆ.ಅರಿಗ, ಪೆರಾಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ.ಕಾಶಿಪಟ್ಣ, ಪ್ರವೀಣ ಕುಮಾರ್ ಜೈನ್, ಪ್ರವೀಣ ಪಿಂಟೋ, ಸಂಜೀವ ಶೆಟ್ಟಿ, ನಿವೃತ್ತ ಪೋಲಿಸ್ ಅಧಿಕಾರಿ ಪೀತಾಂಬರ ಹೆರಾಜೆ, ಪೆರಾಡಿ ಸಿ.ಎ.ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ, ಸದಾನಂದ ಪೂಜಾರಿ, ದಿನೇಶ್ ಶೆಟ್ಟಿ, ಚಂದ್ರಶೇಖರ್ ಜಾರೋಡಿ, ನಾರಾವಿ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಕಿಶೋರ್ ಕುಮಾರ್ ಕಂಠಾವು, ದಿನೇಶ್ ಶೆಟ್ಟಿ ಮಾಳ, ದೇವಳದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೊಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಹಾಜರಿದ್ದರು.</p>.<p>ಧರಣೇಂದ್ರ ಜೈನ್ ಸ್ವಾಗತಿಸಿದರು. ಸತೀಶ್ ಹೊಸ್ಮಾರ್ ನಿರೂಪಿಸಿದರು.</p>.<p>ಆನೆಗುಂದಿ ಸರಸ್ವತೀ ಪೀಠದ ಕಾಳಹಸ್ತೇಂದ್ರ ಸರಸ್ವತೀ ಸ್ವಾಮೀಜಿ ಬೆಳಿಗ್ಗೆ ದೇವಳಕ್ಕೆ ಭೇಟಿ ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಯೋಗಾಸನ ನೃತ್ಯ, ಮಹಿಳಾ ಕುಣಿತ ಭಜನೆ ನಡೆದವು.</p>.<p> ಇಂದಿನ ಕಾರ್ಯಕ್ರಮ: ಬೆಳಿಗ್ಗೆ ಗಂಟೆ 8ರಿಂದ ಗಣಯಾಗ ತತ್ವ ಹೋಮ ಗಾಯತ್ರಿ ಮಂತ್ರ, ಬ್ರಹ್ಮಕಲಶದ ಮಂಡಲ ರಚನೆ, ವಸಂತ ಪೂಜೆ, ಮಹಾಪೂಜೆ, ದೀಪಬಲಿ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಮಹಿಳಾ ಧಾರ್ಮಿಕ ಸಭೆ ನಡೆಯಲಿದ್ದು, ಲಾವಣ್ಯ ಬಲ್ಲಾಳ ಜೈನ್, ಮಲ್ಲಿಕಾ ಯಶವಂತ ಶೆಟ್ಟಿ, ಸುಜಿತಾ ವಿ ಬಂಗೇರ ಭಾಗವಹಿಸಲಿದ್ದಾರೆ.</p>.<p>ಸಂಜೆ 6.30ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಶಾಸಕರಾದ ಉಮಾನಾಥ ಕೋಟ್ಯಾನ್, ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಬಿ. ರಮಾನಾಥ ರೈ ಭಾಗವಹಿಸುವರು. ಹೊಸ್ಮಾರಿನ ಎಂ.ಜೆ. ಸ್ಟೆಪ್ ಆಪ್ ಡ್ಯಾನ್ಸ್ ಕ್ಲಾಸ್ ಹೊಸ್ಮಾರ್ ಅವರಿಂದ ಜಾನಪದ ಹಾಗೂ ಸೆಮಿ ಕ್ಲಾಸಿಕಲ್ ಡ್ಯಾನ್ಸ್, ಗೆಜ್ಜೆಗಿರಿ ಮೇಳದಿಂದ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.</p>.<div><blockquote>ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಲಕ್ಷಾಂತರ ನಮ್ಮ ಬಂಧುಗಳು ಅಲ್ಲಿದ್ದಾರೆ. ಬ್ರಹ್ಮಕಲಶೋತ್ಸವದಲ್ಲಿ ಅಲ್ಲಿನವರ ಸುರಕ್ಷತೆಗೆ ಸೂರ್ಯದೇವರಲ್ಲಿ ಪ್ರಾರ್ಥಿಸೋಣ. ಶಾಂತಿಯ ವಾತಾವರಣ ನಿರ್ಮಾಣವಾಗಿ ಸಾತ್ವಿಕ ಶಕ್ತಿ ವಿಜೃಂಭಿಸಲಿ </blockquote><span class="attribution">ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೂಡುಬಿದಿರೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>