10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತ ಪಾಠವನ್ನು ಕೈಬಿಟ್ಟು ಕನ್ನಡ ಮಾಧ್ಯಮದ ಕನ್ನಡ ಭಾಷಾ ಪುಸ್ತಕದಲ್ಲಿ ಸೇರ್ಪಡೆ ಮಾಡಿದ ಸರ್ಕಾರ ಕ್ರಮವು ರಾಜ್ಯದ ಬಿಲ್ಲವ, ಈಡಿಗ ಮತ್ತು ಈ ಸಮಾಜದ ಇತರ ಉಪ ಪಂಗಡಗಳಿಗೆ ಹಾಗೂ ಗುರುಗಳ ಅಸಂಖ್ಯಾತ ಅನುಯಾಯಿಗಳ ಭಾವನೆಗೆ ತೀವ್ರತರ ನೋವು ತಂದಿತ್ತು. ನಾರಾಯಣ ಗುರುಗಳ ಪಠ್ಯವನ್ನು ಹಿಂದಿನಂತೆಯೇ ಉಳಿಸಿಕೊಳ್ಳದಿದ್ದರೆ ಸಂಘಟಿತ ಹೋರಾಟ ನಡೆಸುವುದಾಗಿ ಯೂನಿಯನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಬಿಲ್ಲವ ಸಂಘಟನೆಗಳ ಪ್ರಮುಖರು ನಿರ್ಧರಿಸಿದ್ದರು. ವಿವಾದ ಇತ್ಯರ್ಥ ಪಡಿಸಲು ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದರು.