ಕಳೆದ ಮಾರ್ಚ್ 15 ರಂದು ದೇಶದ 11 ಸ್ಥಳಗಳಾದ ಕೇರಳದ ಕಣ್ಣೂರು, ಮಣಪ್ಪುರಂ, ಕೊಲ್ಲಂ, ಕಾಸರಗೋಡು ಮತ್ತು ಬೆಂಗಳೂರಿನ ಎರಡು ಸ್ಥಳ ಹಾಗೂ ದೆಹಲಿಯ ಕೆಲವೆಡೆ ರಾಷ್ಟ್ರೀಯ ತನಿಖಾ ದಳದ ತಂಡ ದಾಳಿ ನಡೆಸಿತ್ತು. ಕೇರಳ ಮೂಲದ ಮಹಮ್ಮದ್ ಅಮೀನ್ ಅಲಿಯಾಸ್ ಅಬೂ ಯಹ್ಯಾ ನೇತೃತ್ವದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಈತನ ನೇತೃತ್ವದ ತಂಡವು ಐಸಿಸ್ ಪರವಾದ ಅಜೆಂಡಾಗಳನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಾದ ಟೆಲಿಗ್ರಾಂ, ಹೂಪ್, ಇಸ್ಟ್ಯಾಗ್ರಾಂಗಳಲ್ಲಿ ಪ್ರಚಾರ ಪಡಿಸುವುದು ಮತ್ತು ಐಎಸ್ ಪರವಾದ, ಜಿಹಾದಿ ಮಾನಸಿಕತೆಯನ್ನು ಯುವಕರಲ್ಲಿ ತುಂಬಿ ಐಎಸ್ಗೆ
ಸೇರ್ಪಡೆಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು. ಇದರ ಆಧಾರದಲ್ಲಿ ಎನ್ಐಎ ಏಳು ಮಂದಿ ಶಂಕಿತ ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಿ ದಾಳಿ ನಡೆಸಿತ್ತು.