‘ಅಬ್ಬಾಸ್ ಅವರ ಪುತ್ರ ಅಶ್ರಫ್ ಅವರನ್ನು ಹುಡುಕಿಕೊಂಡು ಎನ್ಐಎ ಅಧಿಕಾರಿಗಳು ಬಂದಿದ್ದರು. ಅಶ್ರಫ್ ಮನೆಯಲ್ಲಿ ಇರಲಿಲ್ಲ. ಅಧಿಕಾರಿಗಳು ಮೊಬೈಲ್ ಮೂಲಕ ಅಶ್ರಫ್ನನ್ನು ಸಂಪರ್ಕಿಸಿ, ಅವರ ಬ್ಯಾಂಕ್ ಖಾತೆಗೆ ₹ 16 ಲಕ್ಷ ಜಮೆಯಾದ ಬಗ್ಗೆ ಮಾಹಿತಿ ಕೇಳಿದರು. ತಾನು ಈ ಮೊದಲು ವಿಟ್ಲದಲ್ಲಿ ಸೋಫಾ ತಯಾರಿ ಹಾಗೂ ಮಾರಾಟದ ವ್ಯವಹಾರ ಮಾಡುತ್ತಿದ್ದೆ. ಅಲ್ಲಿನ ಜಾಗ ಮಾರಿದ್ದು, ಅದಕ್ಕೆ ಸಂಬಂಧಿಸಿ ₹ 16 ಲಕ್ಷ ತಮ್ಮ ಖಾತೆಗೆ ಜಮೆಯಾಗಿದೆ. ತಾನೀಗ ಕೇರಳದ ಚೆರ್ಕಳದಲ್ಲಿ ವ್ಯವಹಾರ ನಡೆಸುತ್ತಿದ್ದು, ವಿಚಾರಣೆಗೆ ಕರೆದಾಗ ಹಾಜರಾಗುವುದಾಗಿ ಅಶ್ರಫ್ ತಿಳಿಸಿದರು. ಬಳಿಕ ಎನ್ಐಎ ಅಧಿಕಾರಿಗಳು ಅಬ್ಬಾಸ್ ಅವರ ಮನೆಯನ್ನು ಪರಿಶೀಲನೆ ನಡೆಸಿ ನಿರ್ಗಮಿಸಿದರು’ ಸ್ಥಳೀಯ ಮೂಲಗಳು ತಿಳಿಸಿವೆ.