ಮಂಗಳೂರು: ಇಲ್ಲಿನ ಎಸ್ ಡಿಪಿಐ ಕಚೇರಿ ಮೇಲೆ ಬೆಳಗಿನ ಜಾವ 3.30ರ ಸುಮಾರಿಗೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು, ದಾಖಲೆ ಪರಿಶೀಲಿಸಿ, ವಾಪಸ್ ತೆರಳಿದರು.
ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಎಸ್ ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕ್ಕರ್, 'ನನಗೆ ತಡವಾಗಿ ಈ ಬಗ್ಗೆ ಮಾಹಿತಿ ದೊರೆಯಿತು. ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ' ಎಂದರು.
'ಕೆಲವೊಂದು ದಾಖಲೆ ಪತ್ರ ಹಾಗೂ ನಾವು ಬಳಸಿದ ಲ್ಯಾಪ್ ಟಾಪ್ ಪಡೆದುಕೊಂಡಿದ್ದಾರೆ. ಬಾಡಿಗೆ ಒಪ್ಪಂದ ಪತ್ರ ಹಾಗೂ ನಮ್ಮ ಕಾರ್ಯಕ್ರಮದ ಕೆಲವು ದಾಖಲೆ ತೆಗೆದುಕೊಂಡು ಹೋಗಿದ್ದಾರೆ. ಯಾವ ವಿಚಾರಕ್ಕೆ ದಾಳಿ ಮಾಡಿದ್ದಾರೆ ಎಂದು ಅವರು ತಿಳಿಸಿಲ್ಲ. ಆದರೆ ಇದು ಬಿಜೆಪಿಯ ಕುತಂತ್ರ ಎನ್ನುವುದು ಸ್ಪಷ್ಟ' ಎಂದರು. ನಾವು ರಾಜಕೀಯವಾಗಿ ಬೆಳೆಯುವುದನ್ನು ಸಹಿಸದೆ ಹೀಗೆ ಮಾಡಿದ್ದಾರೆ ಎಂದರು.