ಅಗತ್ಯ ವೈದ್ಯಕೀಯ ಹಾಗೂ ಹಾಲು, ಪತ್ರಿಕೆ, ಎಪಿಎಂಸಿಗೆ ತರಕಾರಿ ಹಣ್ಣು ಹಂಪಲುಗಳ ವಾಹನ ಸಾಗಾಟ ಅಬಾಧಿತವಾಗಿರುತ್ತದೆ. ಕರ್ಫ್ಯೂ ಅವಧಿಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಗೆ ಪ್ರಯಾಣಿಕರನ್ನು ಕರೆತರಲು ಅಥವಾ ತಲುಪಿಸಲು ಸಾರ್ವಜನಿಕ ವಾಹನಗಳನ್ನೇ ಬಳಸಬೇಕು. ಒಂದು ವೇಳೆ ತೀರಾ ಅಗತ್ಯವಾದಲ್ಲಿ ತಲುಪಿಸುವವರು ಪ್ರಯಾಣಿಕರ ಟಿಕೆಟ್ಗಳನ್ನು ತೋರಿಸಿದ್ದಲ್ಲಿ ನಿರ್ದಿಷ್ಟ ಸಂದರ್ಭಗಳಲ್ಲಿ ಅವಕಾಶ ಕಲ್ಪಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಆದರೆ ಆ ನೆಪದಲ್ಲಿ ವಿನಾಕಾರಣ ಸಂಚಾರಕ್ಕೆ ಅವಕಾಶವಿಲ್ಲ ಎಂದು ತಿಳಿಸಿದರು.