ಮುಖ್ಯ ಅತಿಥಿಯಾಗಿದ್ದ ಆರ್ಎಂಎಕ್ಸ್ ಕಾಂಕ್ರೀಟ್ ಇಂಡಿಯಾ ಪಾಲುದಾರ ಪ್ರತಾಪ್ ಭಂಡಾರಿ, ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶ್ರೀ ಸಾಯಿ ಮೆಡಿಕಲ್ಸ್ ಮಾಲೀಕ ಭುಜಂಗ ಸುಲಾಯ, ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಕೋಶಾಧಿಕಾರಿ ಅರುಣ್ ಬಿತ್ತಪಾದೆ, ಬಿ.ಎಲ್. ಸ್ಟೋರ್ ಬಿತ್ತಪಾದೆ ಮಾಲೀಕ ಉಸ್ಮಾನ್ ಬಿತ್ತಪಾದೆ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪುಷ್ಪರಾಜ್ ಕೆ., ಸಹಯೋಜನಾಧಿಕಾರಿ ಚೈತ್ರಾ, ಸಂಯೋಜಕ ಕೀರ್ತಿರಾಜ್ ಪಡು, ಕಾಲೇಜು ವಿದ್ಯಾರ್ಥಿ ನಾಯಕ ನಿತಿನ್ ಕುವೆಲ್ಲೊ, ಎನ್ಎಸ್ಎಸ್ ಘಟಕ ನಾಯಕ ಕ್ಲಿಂಟನ್ ಕಾರ್ಡೋಜ, ಪ್ರತೀಕ್ಷಾ, ಉಪನ್ಯಾಸಕರಾದ ಬಾಲಿಕಾ, ನರೇಶ್ ಮಲ್ಲಿಗೆಮಾಡು ಉಪಸ್ಥಿತರಿದ್ದರು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.