ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಂದಿನ ಸುರತ್ಕಲ್ ಮೇಳದಲ್ಲಿ ಭಾಗವತರಾಗಿದ್ದ ರಘುರಾಮ ಅವರು, ಮೇಳದ ಎಲ್ಲ ಕೆಲಸಗಳನ್ನು
ನಿರ್ವಹಿಸುವಲ್ಲಿ ಸಮರ್ಥರಾಗಿದ್ದರು.ಬಿ.ಎ. ಶಿಕ್ಷಣ ಪಡೆದು ಶಿಕ್ಷಣ ಇಲಾಖೆಯಲ್ಲಿ ಕೆಲಸಕ್ಕಿದ್ದರೂ, ಅವರನ್ನು ಸೆಳೆದುದು ಯಕ್ಷಗಾನ. ಕುರಿಯ ಶೈಲಿ, ಬಲಿಪ ಶೈಲಿ, ಮಂಡೆಚ್ಚ ಶೈಲಿ ಮಾದರಿಯಲ್ಲಿ ‘ಅಗರಿ ಶೈಲಿ’ಯನ್ನು ಅವರ ತಂದೆ ಶ್ರೀನಿವಾಸ ಭಾಗವತರು ಆರಂಭಿಸಿದ್ದರು.