ವಿಮಲಾ ರಂಗಯ್ಯ ಅವರು ನೀಡಿದ ಧ್ವನಿವರ್ಧಕ, ಸತೀಶ ಕೂಜುಗೋಡು ನೀಡಿದ ಊಟದ ತಟ್ಟೆ ಸ್ಟಾಂಡ್, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಂಡೋಡಿಗೆ ನೀಡಲಾಯಿತು. ದಿನೇಶ್ ಮೊಗ್ರ, ಸ್ವಾತಿ ಮೊಗ್ರ, ವಿಮಲಾ ರಂಗಯ್ಯ, ದೀಪಕ್ ಎಚ್.ಬಿ, ಬಿಪಿನ್ ಜಾಕೆ ಸುಬ್ರಹ್ಮಣ್ಯದ ಯುವ ತೇಜಸ್ ಸಂಸ್ಥೆಗೆ ಆಂಬುಲೆನ್ಸ್ ನಿರ್ವಹಣಾ ವೆಚ್ಚ ಕೊಡುಗೆಯಾಗಿ ನೀಡಿದರು. ಗುರುಪ್ರಸಾದ್ ದಂಪತಿ, ದೇವರಗದ್ದೆ ಅಂಗನವಾಡಿಗೆ ಆಟದ ಸಾಮಾನು ಇಡಲು ಕಪಾಟು ವ್ಯವಸ್ಥೆಗೊಳಿಸಿದರು. ಮಿಕ್ಸಿ ಕೊಡುಗೆಯಾಗಿ ನೀಡಿದರು.