ಮಹಮ್ಮದ್ ಎಂಬುವವರು ತಮ್ಮ ಮನೆ ಸಮೀಪ ಸ್ಟೇಷನರಿ-ದಿನಸಿ ಸಾಮಗ್ರಿ ವ್ಯಾಪಾರದ ಜತೆಗೆ ಚಹಾ ಕ್ಯಾಂಟೀನ್ ನಡೆಸುತ್ತಿದ್ದರು. ಎಂದಿನಂತೆ ಸೋಮವಾರ ಅಂಗಡಿ ಬಾಗಿಲು ತೆರೆದಿದ್ದ ಅವರು ಮಧ್ಯಾಹ್ನ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದನ್ನು ಕಂಡ ಸ್ಥಳೀಯರು ಬೆಂಕಿ ನಂದಿಸಲು ಮುಂದಾದ ವೇಳೆ ಮಹಮ್ಮದ್ ‘ನನ್ನ ಅಂಗಡಿಗೆ ನಾನೇ ಬೆಂಕಿ ಹಚ್ಚಿದ್ದೇನೆ. ಅಂಗಡಿ ಸುಟ್ಟು ಭಸ್ಮವಾಗಲಿ ನಿಮಗೇನು’ ಎಂದು ಬೆಂಕಿ ನಂದಿಸಲು ಬಂದವರನ್ನು ತಡೆದರು. ಅವರು ಮನೆಗೆ ತೆರಳಿದ ಬಳಿಕ ಸ್ಥಳೀಯರು ಬೆಂಕಿ ನಂದಿಸಿದರು. ಸ್ಥಳೀಯರು ನೀಡಿದ ಮಾಹಿತಿಯಂತೆ, ಸಂಪ್ಯ ಪೊಲೀಸ್ ಠಾಣೆಯ ಎಎಸ್ಐ ತಿಮ್ಮಯ್ಯ ಗೌಡ ಹಾಗೂ ಈಶ್ವರಮಂಗಲ ಹೊರಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಸಹಕರಿಸಿದರು.