ಕಾರ್ಯಕ್ರಮದ ನಡುವೆ ಬಂದ ದೂರವಾಣಿ ಕರೆ ಸ್ವೀಕಿರಿಸಿದ ಶಾಸಕ ವೇದವ್ಯಾಸ ಕಾಮತ್ ಕರೆ ಮುಗಿದ ತಕ್ಷಣ ‘ಸಿಹಿ ಸುದ್ದಿ ಇದೆ‘ ಎಂದು ಹೇಳಿ, ‘ನಗರದಲ್ಲಿ ನೀರಿನ ದರ ಕಡಿಮೆ ಮಾಡಲು ಈ ಹಿಂದೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಈಗ ಫಲ ಸಿಕ್ಕಿದೆ’ ಎಂದು ಹೇಳಿದರು. ಇದನ್ನು ಕೇಳಿದ ಎಲ್ಲರೂ ನೀರಿನ ದರ ಕಡಿಮೆ ಆಗಿದೆ ಎಂಬ ವಿಷಯ ಘೋಷಿಸುತ್ತಾರೆ ಏಂಬ ನಿರೀಕ್ಷೆಯಲ್ಲಿದ್ದರು. ಆದರೆ ಮಾತು ಮುಂದುವರಿಸಿದ ಶಾಸಕರು ‘ಪ್ರಸ್ತಾವಕ್ಕೆ ಸರ್ಕಾರ ಪೂಕರವಾಗಿ ಸ್ಪಂದಿಸಿದ್ದು ಮೌಖಿಕವಾಗಿ ಒಪ್ಪಿಕೊಂಡಿದೆ. ದರ ಕಡಿಮೆ ಮಾಡುವ ಸಾಧ್ಯತೆ ಇದೆ’ ಎಂದು ಹೇಳಿದಾಗ ಎಲ್ಲರೂ ಸಪ್ಪೆಯಾದರು. ‘ಹೊಸ ದರ ಜಾರಿಗೆ ಬಂದರೆ ಸಾವಿರ ಲೀಟರ್ ನೀರಿಗೆ ₹ 5ರಂತೆ ನೀಡಿದರೆ ಸಾಕಾಗುತ್ತದೆ’ ಎಂದು ಶಾಸಕರು ವಿವರಿಸಿದರು.