ಮಡಿಕೇರಿಯ ಶುಂಠಿಕೊಪ್ಪ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೊನಿ ನಿವಾಸಿಯಾದ ಮಹಿಳೆಯು ಮಗುವಿನೊಂದಿಗೆ ಇದೇ 14ರಂದು ಆಸ್ಪತ್ರೆಗೆಂದು ಹೋದವರು ವಾಪಸಾಗಿರಲಿಲ್ಲ. ಈ ಸಂಬಂಧ ಮನೆಯವರು ಶುಂಠಿಕೊಪ್ಪ ಪೋಲೀಸರಿಗೆ ದೂರು ನೀಡಿದ್ದರು. ಧರ್ಮಸ್ಥಳಕ್ಕೆ ಹೋಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲ್ಲಿನ ಠಾಣೆಗೆ ಮಾಹಿತಿ ರವಾನೆಯಾಗಿತ್ತು. ಉಪನಿರೀಕ್ಷಕ ಕೃಷ್ಣಕಾಂತ್ ಪಾಟೀಲ ಮತ್ತು ಕಾನ್ಸ್ಟೆಬಲ್ ಶೇಷಣ್ಣ ಅವರ ತಂಡ ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಬರುವ ಬಸ್ಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಮತ್ತು ಮಗು ಪತ್ತೆ ಆಗಿದ್ದಾರೆ.