ಇಂದ್ರಪ್ರತಿಷ್ಠೆ, ತೋರಣಮು ಹೂರ್ತ, ವಿಮಾನಶುದ್ಧಿ, ನಾಂದಿ ಮಂಗಲ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ, ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಕ್ಷೇತ್ರಪಾಲ ಪ್ರತಿಷ್ಠೆ, ನಾಗಪ್ರತಿಷ್ಠೆ, ಶ್ರೀ ಪದ್ಮಾವತಿ ಅಮ್ಮನವರ ಪ್ರತಿಷ್ಠೆ, ೫೪ ಕಲಶ ಅಭಿಷೇಕ ಮತ್ತು ಮಹಾಪೂಜೆ ನಡೆಯಿತು.
ಧಾಮ ಸಂಪ್ರೋಕ್ಷಣಾ ಸಮಿತಿಯ ಅಧ್ಯಕ್ಷ ರತನ್ ಕುಮಾರ್, ಕಾರ್ಯದರ್ಶಿ ಅಮರನಾಥ ಹೆಗ್ಡೆ, ಪ್ರವೀಣ್ ಅಜ್ರಿ ಇದ್ದರು.