‘ಹಲಾಲ್ ಮಾಂಸ ಮಾರಾಟ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರು ನಡೆಸಿದ್ದ ಅಭಿಯಾನದಲ್ಲಿ ಪ್ರವೀಣ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಿಂದೂ ಯುವಕರು ಮಾಂಸ ಮಾರಾಟದಲ್ಲಿ ತೊಡಗುವುದನ್ನು ಉತ್ತೇಜಿಸಲು ಅವರು ಸ್ವತಃ ಕೋಳಿ ಮಾಂಸ ಮಾರಾಟದ ಅಂಗಡಿಯನ್ನು ವರ್ಷದ ಹಿಂದೆ ಆರಂಭಿಸಿದ್ದರು. ಮುಸ್ಲಿಂ ವ್ಯಾಪಾರಿಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ಪ್ರವೀಣ್ ಆರಂಭಿಸಿದ್ದ ಕೋಳಿ ಮಾಂಸದ ಅಂಗಡಿ ಕೆಲವರ ಕೆಂಗಣ್ಣಿಗೆ ಗುರಿಯಾಗಿತ್ತು’ ಎಂದು ಅವರ ಕುಟುಂಬಸ್ಥರು ತಿಳಿಸಿದ್ದರು.