ಕೊಲೆ ಮಾಡಿದವರನ್ನು ಹಿಡಿಯುವುದರ ಜೊತೆಯಲ್ಲಿ ಅದಕ್ಕೆ ಪ್ರಚೋದನೆ ನೀಡಿದವರು ಯಾರು ಎಂಬುದನ್ನು ಕೂಡ ಪತ್ತೆ ಮಾಡಲಾಗುವುದು. ಎನ್ಐಎ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಯುತ್ತಿದ್ದು ಅವರಿಗೆ ಪ್ರಕರಣವನ್ನು ಯಾವಾಗ ಹಸ್ತಾಂತರ ಮಾಡಬೇಕು ಎನ್ನುವುದರ ಕುರಿತ ಚರ್ಚೆಯೂ ನಡೆಯುತ್ತಿದೆ. ತನಿಖೆ ಎನ್ಐಎ ಮಾಡಿದರೂ ಪ್ರಮುಖ ಆರೋಪಿಯನ್ನು ನಾವೇ ಬಂಧಿಸುತ್ತೇವೆ ಎಂದು ಅವರು ತಿಳಿಸಿದರು.