ನಡಿಗೆಯಲ್ಲೇ ಸಾಗುತ್ತಿರುವ ಈ ಕಾರ್ಮಿಕರನ್ನು ಸ್ಥಳೀಯ ಜಿಲ್ಲಾಡಳಿತವಾಗಲೀ, ಇತರೆ ಅಧಿಕಾರಿಗಳಾಗಲೀ ವಿಚಾರಿಸುವ ಗೋಜಿಗೂ ಹೋಗಿಲ್ಲ. ಅವರ ಆರೋಗ್ಯ ತಪಾಸಣೆ ಕೂಡ ನಡೆಸಿಲ್ಲ. ರಾಜ್ಯದ ಗಡಿಯಲ್ಲೂ ಅವರ ಆರೋಗ್ಯ ತಪಾಸಣೆ ನಡೆಸಿಲ್ಲ. ಎಲ್ಲಿಯೂ ಯಾರೊಬ್ಬರೂ ತಮ್ಮ ನೆರವಿಗೆ ಬಂದಿಲ್ಲ, ಆರೋಗ್ಯ ತಪಾಸಣೆಯೂ ಆಗಿಲ್ಲ ಎಂದು ಈ ಕಾರ್ಮಿಕರೇ ಹೇಳಿದ್ದಾರೆ.