ಪತಿ ಶ್ರೀನಿವಾಸ ಪೂಜಾರಿ ಸಿದ್ಧಕಟ್ಟೆ ಹೂವಿನ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದರೆ,ಸುಮತಿ ಬೀಡಿ, ಕೂಲಿ ಮತ್ತು ಮನೆ ಕೆಲಸ ಮಾಡಿಕೊಂಡು ಇಬ್ಬರು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಜನವರಿ 1ರಂದು ಗಂಟಲು ನೋವು ಕಾಣಿಸಿಕೊಂಡ ಸುಮತಿ ಅವರಿಗೆ ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಮತ್ತೆ ನೋವು ಉಲ್ಬಣಿಸಿದ ಪರಿಣಾಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 'ಸಂಪೂರ್ಣ ಸುರಕ್ಷಾ' ಯೋಜನೆಯಡಿ ಮತ್ತೆ ₹1.5ಲಕ್ಷ ವೆಚ್ಚದಲ್ಲಿ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಒಟ್ಟು ಏಳು ಬಾರಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಕೆಲವು ಸಮಯ ಮನೆಯಲ್ಲಿ ಅಡುಗೆ ಸಹಿತ ಮಕ್ಕಳ ಆರೈಕೆ ಮತ್ತಿತರ ಕೆಲಸಗಳನ್ನು ಸ್ವಾವಲಂಬಿಯಾಗಿ ನಡೆಸುತ್ತಿದ್ದರು. ಆದರೆ ಒಂದು ತಿಂಗಳಿನಿಂದ ಮನೆಯಲ್ಲಿ ಹಾಸಿಗೆ ಹಿಡಿದಿರುವ ಇವರ ಆರೈಕೆಗೆ ಪತಿ ಶ್ರೀನಿವಾಸ ಪೂಜಾರಿ ಕೂಡಾ ಮನೆಯಲ್ಲೇ ಉಳಿದುಕೊಂಡಿದ್ದಾರೆ.