ಸಂಸ್ಥೆಗೆ ಸಹಕಾರ ನೀಡಿದ ಕುಂಪಲದ 30ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಗೆ ಸನ್ಮಾನ, ಮುದ್ದು ಕೃಷ್ಣ, ಯಶೋದೆ ಕೃಷ್ಣ ಛಾಯಾಚಿತ್ರ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ, ಮಧ್ಯಾಹ್ನ 4ಕ್ಕೆ ದೇವರ ವೈಭವದ ಶೋಭಾ ಯಾತ್ರೆ ನಡೆಯಲಿದೆ. ಶೋಭಾ ಯಾತ್ರೆಯಲ್ಲಿ 30ಕ್ಕೂ ಹೆಚ್ಚು ಭಜನಾ ತಂಡಗಳು, ರೂಪಕಗಳು, ಬ್ಯಾಂಡ್ ವಾದನ, ಚೆಂಡೆವಾದನ, ಹುಲಿವೇಷ, ಇರಲಿವೆ. ಸಂಜೆ 7ಕ್ಕೆ ಕುಂಪಲ ಶಾಲಾ ಮೈದಾನದಲ್ಲಿ ಯುವ ಮರಾಠ ಕುಂಪಲ
ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.