ಈ ಸಂದರ್ಭದಲ್ಲಿ ಮಾತನಾಡಿದ ಮಹಾಬಲೇಶ್ವರ ಎಂ.ಎಸ್., ‘ಮರ್ಯಾದಾ ಪುರುಷೋತ್ತಮ ರಾಮಚಂದ್ರನನ್ನು ನೆನೆಯುತ್ತಾ ‘ಪುರುಷೋತ್ತಮ’ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಕಿರುವಯಸ್ಸಿನಲ್ಲಿಯೇ ದೇಶದಾದ್ಯಂತ ಅದ್ವೈತ ಸಿದ್ಧಾಂತದ ಮೂಲಕ ಆಧ್ಯಾತ್ಮಿಕ ಏಕತೆಯನ್ನು ಸಾಧಿಸಿದ ಪರಮ ಪುರುಷೋತ್ತಮರಾದ, ಈ ದೇಶದ ಧರ್ಮೋತ್ಥಾನಕ್ಕೆ ಕಾರಣೀಭೂತರಾದ ಶಂಕರಾಚಾರ್ಯರ ಪಾವನ ಜಯಂತಿಯಂದು ನೀಡಲಾದ ಈ ಪ್ರಶಸ್ತಿಯು ನನಗೆ ದೊರಕಿದ ಸೌಭಾಗ್ಯ ಎಂದು ಭಾವಿಸುವೆ. ಈ ಪ್ರಶಸ್ತಿಯು ನಮ್ಮ ಕರ್ಣಾಟಕ ಬ್ಯಾಂಕ್ ಹಾಗೂ ಬ್ಯಾಂಕಿನ ಸಿಬ್ಬಂದಿಗೆ ಸಂದ ಗೌರವವಾಗಿದ್ದು, ನನ್ನ ಸಮಾಜಮುಖಿ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಹೇಳಿದರು.