<p><strong>ಪುತ್ತೂರು</strong>: ಅಕ್ರಮ– ಸಕ್ರಮ ಕಡತವಿಲೇವಾರಿ ಮಾಡುವಾಗ, 94ಸಿ, 94ಸಿಸಿ ಹಕ್ಕು ಪತ್ರ ಮಾಡುವಾಗ ಮತ್ತು ಇತರ ಅಭಿವೃದ್ಧಿ ಕೆಲಸ ಮಾಡಿದಾಗ ಶಾಸಕ ಅಶೋಕ್ ರೈ ಜನರ ಬಳಿ ಓಟು ಕೇಳುತ್ತಾರೆ ಎಂದು ಬಿಜೆಪಿಯವರು ಆರೋಪ ಮಾಡಿದ್ದಾರೆ. ಅಶೋಕ್ ರೈ ಜನರ ಬಳಿ ಓಟು ಕೇಳಿದ್ದು ನಿಜ; ಆದರೆ, ನಿಮ್ಮಂತೆ ಬಡವರ ಬಳಿ ಹಣ ಕೇಳಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.</p>.<p>ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಅಕ್ರಮ ಸಕ್ರಮ ಮಾಡಲು, 94 ಸಿ ಹಕ್ಕು ಪತ್ರ ನೀಡಲು ಬಿಜೆಪಿ ಶಾಸಕರು ಎಲ್ಲರಿಂದಲೂ ಹಣ ಪಡೆದುಕೊಂಡಿದ್ದಾರೆ. ಹಣ ಕೊಡದವರ ಯಾವುದೇ ಕಡತವನ್ನು ಅವರು ವಿಲೇವಾರಿ ಮಾಡಿಯೇ ಇಲ್ಲ. ನನ್ನ ಬಳಿ ಈ ವಿಷಯ ಹೇಳಿದವರಲ್ಲಿ ಬಿಜೆಪಿಯವರೂ ಇದ್ದಾರೆ, ಅವರ ಶಕ್ತಿ ಕೇಂದ್ರದ ಅಧ್ಯಕ್ಷರೂ ಇದ್ದಾರೆ. ಅವರ ಪಕ್ಷದವರೇ ಆದರೂ ಹಣ ಕೊಡದ ಕಾರಣ ಕಡತ ವಿಲೇವಾರಿ ಮಾಡಿಕೊಟ್ಟಿಲ್ಲ, ಬಡವರ ಕಡತಕ್ಕೆ ಕುಮ್ಕಿ ಎಂದು ನಾಮಕರಣ ಮಾಡಿ ಜೀವ ಮಾನದಲ್ಲಿ ಅವರಿಗೆ ಅಕ್ರಮ ಸಕ್ರಮ ಆಗದ ಹಾಗೆ ಮಾಡಿದ್ದಾರೆ. ಇದು ಮಹಾ ಅನ್ಯಾಯ. ಆದರೆ, ನಾನು ಬಡವರಿಗೆ ಅನ್ಯಾಯ ಮಾಡಿಲ್ಲ. ಅರ್ಹರಿಗೆ ಅಕ್ರಮ ಸಕ್ರಮ ಮಾಡಿಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.</p>.<p>ಹಲವಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡಿರುವ ಬಡವರು ತಮ್ಮ ಸ್ವಾಧೀನದಲ್ಲಿರುವ 9 ಸೆಂಟ್ಸ್ ಜಾಗಕ್ಕೆ ಹಕ್ಕು ಪತ್ರ ಕೇಳುತ್ತಾರೆ. ಅದಕ್ಕಾಗಿ ಅವರನ್ನು ಅಲೆದಾಡಿಸಬೇಡಿ. ಕದ್ದು ಮುಚ್ಚಿ ಅವರಿಂದ ಹಣ ಕೇಳಬೇಡಿ. ಯಾರಾದರೂ ಬಡವರಿಂದ ಹಣ ಪಡೆದುಕೊಂಡಿದ್ದರೆ ಅದನ್ನು ಅವರಿಗೆ ಹಿಂತಿರುಗಿಸಿ. ಬಡವರಿಂದ ಯಾರೂ ಹಣ ದೋಚುವ ಕೆಲಸ ಮಾಡಬೇಡಿ ಎಂದು ಹೇಳಿದರು.</p>.<p>ಯಾರಿಗಾದರೂ ನಿವೇಶನವೇ ಇಲ್ಲದಿದ್ದರೆ, ಅಂಥವರಿಗೆ 2.75 ಸೆಂಟ್ಸ್ ಜಾಗವನ್ನು ನಾನು ಕೊಡಿಸುತ್ತೇನೆ. ಸೋಮವಾರ ಕಚೇರಿಗೆ ಅರ್ಜಿ ಸಮೇತ ಬನ್ನಿ ಎಂದು ಅವರು ತಿಳಿಸಿದರು.</p>.<p>ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿದರು. ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ ತಹಶಿಲ್ದಾರ್ ಎಸ್.ಬಿ ಕೂಡಲಗಿ, ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಭಾಗವಹಿಸಿದ್ದರು.</p>.<p>ಕಂದಾಯ ನಿರೀಕ್ಷಕ ಗೋಪಾಲ ಸ್ವಾಗತಿಸಿದರು. ಗ್ರಾಮಕರಣಿಕ ನರಿಯಪ್ಪ ವಂದಿಸಿದರು. ಶಾಸಕರ ಕಚೇರಿ ಸಿಬ್ಬಂದಿ ಪ್ರವೀಣ್, ಕೃಷ್ಣಪ್ರಸಾದ್ ಬೊಳ್ಳಾವು, ರಂಜಿತ್ ಸುವರ್ಣ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-29-624148785</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು</strong>: ಅಕ್ರಮ– ಸಕ್ರಮ ಕಡತವಿಲೇವಾರಿ ಮಾಡುವಾಗ, 94ಸಿ, 94ಸಿಸಿ ಹಕ್ಕು ಪತ್ರ ಮಾಡುವಾಗ ಮತ್ತು ಇತರ ಅಭಿವೃದ್ಧಿ ಕೆಲಸ ಮಾಡಿದಾಗ ಶಾಸಕ ಅಶೋಕ್ ರೈ ಜನರ ಬಳಿ ಓಟು ಕೇಳುತ್ತಾರೆ ಎಂದು ಬಿಜೆಪಿಯವರು ಆರೋಪ ಮಾಡಿದ್ದಾರೆ. ಅಶೋಕ್ ರೈ ಜನರ ಬಳಿ ಓಟು ಕೇಳಿದ್ದು ನಿಜ; ಆದರೆ, ನಿಮ್ಮಂತೆ ಬಡವರ ಬಳಿ ಹಣ ಕೇಳಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು.</p>.<p>ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಅಕ್ರಮ ಸಕ್ರಮ ಮಾಡಲು, 94 ಸಿ ಹಕ್ಕು ಪತ್ರ ನೀಡಲು ಬಿಜೆಪಿ ಶಾಸಕರು ಎಲ್ಲರಿಂದಲೂ ಹಣ ಪಡೆದುಕೊಂಡಿದ್ದಾರೆ. ಹಣ ಕೊಡದವರ ಯಾವುದೇ ಕಡತವನ್ನು ಅವರು ವಿಲೇವಾರಿ ಮಾಡಿಯೇ ಇಲ್ಲ. ನನ್ನ ಬಳಿ ಈ ವಿಷಯ ಹೇಳಿದವರಲ್ಲಿ ಬಿಜೆಪಿಯವರೂ ಇದ್ದಾರೆ, ಅವರ ಶಕ್ತಿ ಕೇಂದ್ರದ ಅಧ್ಯಕ್ಷರೂ ಇದ್ದಾರೆ. ಅವರ ಪಕ್ಷದವರೇ ಆದರೂ ಹಣ ಕೊಡದ ಕಾರಣ ಕಡತ ವಿಲೇವಾರಿ ಮಾಡಿಕೊಟ್ಟಿಲ್ಲ, ಬಡವರ ಕಡತಕ್ಕೆ ಕುಮ್ಕಿ ಎಂದು ನಾಮಕರಣ ಮಾಡಿ ಜೀವ ಮಾನದಲ್ಲಿ ಅವರಿಗೆ ಅಕ್ರಮ ಸಕ್ರಮ ಆಗದ ಹಾಗೆ ಮಾಡಿದ್ದಾರೆ. ಇದು ಮಹಾ ಅನ್ಯಾಯ. ಆದರೆ, ನಾನು ಬಡವರಿಗೆ ಅನ್ಯಾಯ ಮಾಡಿಲ್ಲ. ಅರ್ಹರಿಗೆ ಅಕ್ರಮ ಸಕ್ರಮ ಮಾಡಿಕೊಟ್ಟಿದ್ದೇನೆ ಎಂದು ಅವರು ತಿಳಿಸಿದರು.</p>.<p>ಹಲವಾರು ವರ್ಷಗಳಿಂದ ಮನೆ ನಿರ್ಮಿಸಿಕೊಂಡಿರುವ ಬಡವರು ತಮ್ಮ ಸ್ವಾಧೀನದಲ್ಲಿರುವ 9 ಸೆಂಟ್ಸ್ ಜಾಗಕ್ಕೆ ಹಕ್ಕು ಪತ್ರ ಕೇಳುತ್ತಾರೆ. ಅದಕ್ಕಾಗಿ ಅವರನ್ನು ಅಲೆದಾಡಿಸಬೇಡಿ. ಕದ್ದು ಮುಚ್ಚಿ ಅವರಿಂದ ಹಣ ಕೇಳಬೇಡಿ. ಯಾರಾದರೂ ಬಡವರಿಂದ ಹಣ ಪಡೆದುಕೊಂಡಿದ್ದರೆ ಅದನ್ನು ಅವರಿಗೆ ಹಿಂತಿರುಗಿಸಿ. ಬಡವರಿಂದ ಯಾರೂ ಹಣ ದೋಚುವ ಕೆಲಸ ಮಾಡಬೇಡಿ ಎಂದು ಹೇಳಿದರು.</p>.<p>ಯಾರಿಗಾದರೂ ನಿವೇಶನವೇ ಇಲ್ಲದಿದ್ದರೆ, ಅಂಥವರಿಗೆ 2.75 ಸೆಂಟ್ಸ್ ಜಾಗವನ್ನು ನಾನು ಕೊಡಿಸುತ್ತೇನೆ. ಸೋಮವಾರ ಕಚೇರಿಗೆ ಅರ್ಜಿ ಸಮೇತ ಬನ್ನಿ ಎಂದು ಅವರು ತಿಳಿಸಿದರು.</p>.<p>ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿದರು. ಅಕ್ರಮ ಸಕ್ರಮ ಸಮಿತಿ ಕಾರ್ಯದರ್ಶಿ ತಹಶಿಲ್ದಾರ್ ಎಸ್.ಬಿ ಕೂಡಲಗಿ, ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಭಾಗವಹಿಸಿದ್ದರು.</p>.<p>ಕಂದಾಯ ನಿರೀಕ್ಷಕ ಗೋಪಾಲ ಸ್ವಾಗತಿಸಿದರು. ಗ್ರಾಮಕರಣಿಕ ನರಿಯಪ್ಪ ವಂದಿಸಿದರು. ಶಾಸಕರ ಕಚೇರಿ ಸಿಬ್ಬಂದಿ ಪ್ರವೀಣ್, ಕೃಷ್ಣಪ್ರಸಾದ್ ಬೊಳ್ಳಾವು, ರಂಜಿತ್ ಸುವರ್ಣ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260603-29-624148785</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>