<p>ಪುತ್ತೂರು: ಇಲ್ಲಿನ ಕೆಎಸ್ಆರ್ಟಿಸಿ ಬಸ್ ಡಿಪೊದಲ್ಲಿ ಬಸ್ಗಳಿಗೆ ಕೊರತೆ ಇಲ್ಲ. ಸಿಎನ್ಜಿ ಚಾಲಿತ 25 ಬಸ್ಗಳೂ ಬರಲಿದ್ದು, ಆ ಬಸ್ಗಳು ಮಂಗಳೂರು ಮತ್ತು ಪುತ್ತೂರಿನಲ್ಲಿ ಸಂಚರಿಸಲಿವೆ ಎಂದು ಶಾಸಕ ಅಶೋಕ್ ರೈ ಹೇಳಿದರು.</p>.<p>ಪುತ್ತೂರಿನಿಂದ ಬೇಲೂರು-ಹಳೇಬೀಡು- ಜಾವಗಲ್ ಮೂಲಕ ಅರಸೀಕೆರೆ ಹಾಗೂ ಮೈಸೂರು ಮೂಲಕ ಬೆಂಗಳೂರಿಗೆ ಆರಂಭಿಸಿರುವ ಬಸ್ ಸೇವೆಗೆ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಆಟೊ ಚಾಲಕರಿಗೆ ತೊಂದರೆಯಾಗದಂತೆ ಪುತ್ತೂರಿನಲ್ಲಿ ಸಿಟಿ ಬಸ್ ವ್ಯವಸ್ಥೆಗೆ ಯೋಜನೆ ಹಾಕಿಕೊಳ್ಳಲಾಗುವುದು. ಪುತ್ತೂರಿನಿಂದ ಮುಂಬೈಗೆ ನೇರವಾಗಿ ಮಂಗಳೂರು ಮೂಲಕ ಬಸ್ ಓಡಿಸುವ ಯೋಜನೆಯೂ ಇದ್ದು, ಜನರಿಂದ ಬೇಡಿಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.</p>.<p>ಜಾವಗಲ್ನಲ್ಲಿ ಪ್ರಸಿದ್ಧ ದರ್ಗಾ ಇದ್ದು, ಅಲ್ಲಿಗೆ ಹೋಗಲು ಬಸ್ ವ್ಯವಸ್ಥೆ ಮಾಡಬೇಕೆಂದು ಅಲ್ಪಸಂಖ್ಯಾತರು ಮನವಿ ಮಾಡಿದ್ದರು. ಬೇಲೂರು- ಹಳೇಬೀಡಿಗೆ ಹೋಗುವ ಯಾತ್ರಾರ್ಥಿಗಳೂ ಬೇಡಿಕೆ ಇಟ್ಟಿದ್ದರು. ಪ್ರತಿ ದಿನ ಬೆಳಿಗ್ಗೆ ಪುತ್ತೂರಿನಿಂದ 8 ಗಂಟೆಗೆ ಉಪ್ಪಿನಂಗಡಿ-ಸಕಲೇಶಪುರ -ಬೇಲೂರು-ಹಳೇಬೀಡು ಮೂಲಕ ಜಾವಗಲ್-ಅರಸೀಕೆರೆಗೆ ಬಸ್ ಸಂಚರಿಸಲಿದೆ. ಮಧ್ಯಾಹ್ನ 1.45ಕ್ಕೆ ಅಲ್ಲಿಂದ ಹೊರಡುವ ಬಸ್ ಸಂಜೆ 7.15ಕ್ಕೆ ಪುತ್ತೂರಿಗೆ ಬರಲಿದೆ. ರಾತ್ರಿ 9.15ಕ್ಕೆ ಪುತ್ತೂರಿನಿಂದ ಮೈಸೂರು ಮೂಲಕವಾಗಿ ಎಸಿ ಸೂಪರ್ ಡಿಲೆಕ್ಸ್ ಬಸ್ ಹೊರಡಲಿದೆ. ಈ ಬಸ್ ಸೇವೆಗಳು ಏ.1ರಿಂದ ಆರಂಭವಾಗಲಿದೆ ಎಂದರು.</p>.<p>ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ನಿಕಟಪೂರ್ವ ಅಧ್ಯಕ್ಷ ವಿ.ಎಚ್.ಎ. ಶಕೂರ್ ಮಾತನಾಡಿದರು.</p>.<p>ಅಕ್ರಮ ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ದ.ಕ. ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಭಾಗವಹಿಸಿದ್ದರು.</p>.<p>ಕೆಎಸ್ಆರ್ಟಿಸಿ ಪುತ್ತೂರು ಘಟಕದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಸ್ವಾಗತಿಸಿದರು. ಸಂಚಾರ ನಿಯಂತ್ರಣಾಧಿಕಾರಿ ವೆಂಕಟರಮಣ ಭಟ್ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-29-1153010803</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪುತ್ತೂರು: ಇಲ್ಲಿನ ಕೆಎಸ್ಆರ್ಟಿಸಿ ಬಸ್ ಡಿಪೊದಲ್ಲಿ ಬಸ್ಗಳಿಗೆ ಕೊರತೆ ಇಲ್ಲ. ಸಿಎನ್ಜಿ ಚಾಲಿತ 25 ಬಸ್ಗಳೂ ಬರಲಿದ್ದು, ಆ ಬಸ್ಗಳು ಮಂಗಳೂರು ಮತ್ತು ಪುತ್ತೂರಿನಲ್ಲಿ ಸಂಚರಿಸಲಿವೆ ಎಂದು ಶಾಸಕ ಅಶೋಕ್ ರೈ ಹೇಳಿದರು.</p>.<p>ಪುತ್ತೂರಿನಿಂದ ಬೇಲೂರು-ಹಳೇಬೀಡು- ಜಾವಗಲ್ ಮೂಲಕ ಅರಸೀಕೆರೆ ಹಾಗೂ ಮೈಸೂರು ಮೂಲಕ ಬೆಂಗಳೂರಿಗೆ ಆರಂಭಿಸಿರುವ ಬಸ್ ಸೇವೆಗೆ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ಆಟೊ ಚಾಲಕರಿಗೆ ತೊಂದರೆಯಾಗದಂತೆ ಪುತ್ತೂರಿನಲ್ಲಿ ಸಿಟಿ ಬಸ್ ವ್ಯವಸ್ಥೆಗೆ ಯೋಜನೆ ಹಾಕಿಕೊಳ್ಳಲಾಗುವುದು. ಪುತ್ತೂರಿನಿಂದ ಮುಂಬೈಗೆ ನೇರವಾಗಿ ಮಂಗಳೂರು ಮೂಲಕ ಬಸ್ ಓಡಿಸುವ ಯೋಜನೆಯೂ ಇದ್ದು, ಜನರಿಂದ ಬೇಡಿಕೆ ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದರು.</p>.<p>ಜಾವಗಲ್ನಲ್ಲಿ ಪ್ರಸಿದ್ಧ ದರ್ಗಾ ಇದ್ದು, ಅಲ್ಲಿಗೆ ಹೋಗಲು ಬಸ್ ವ್ಯವಸ್ಥೆ ಮಾಡಬೇಕೆಂದು ಅಲ್ಪಸಂಖ್ಯಾತರು ಮನವಿ ಮಾಡಿದ್ದರು. ಬೇಲೂರು- ಹಳೇಬೀಡಿಗೆ ಹೋಗುವ ಯಾತ್ರಾರ್ಥಿಗಳೂ ಬೇಡಿಕೆ ಇಟ್ಟಿದ್ದರು. ಪ್ರತಿ ದಿನ ಬೆಳಿಗ್ಗೆ ಪುತ್ತೂರಿನಿಂದ 8 ಗಂಟೆಗೆ ಉಪ್ಪಿನಂಗಡಿ-ಸಕಲೇಶಪುರ -ಬೇಲೂರು-ಹಳೇಬೀಡು ಮೂಲಕ ಜಾವಗಲ್-ಅರಸೀಕೆರೆಗೆ ಬಸ್ ಸಂಚರಿಸಲಿದೆ. ಮಧ್ಯಾಹ್ನ 1.45ಕ್ಕೆ ಅಲ್ಲಿಂದ ಹೊರಡುವ ಬಸ್ ಸಂಜೆ 7.15ಕ್ಕೆ ಪುತ್ತೂರಿಗೆ ಬರಲಿದೆ. ರಾತ್ರಿ 9.15ಕ್ಕೆ ಪುತ್ತೂರಿನಿಂದ ಮೈಸೂರು ಮೂಲಕವಾಗಿ ಎಸಿ ಸೂಪರ್ ಡಿಲೆಕ್ಸ್ ಬಸ್ ಹೊರಡಲಿದೆ. ಈ ಬಸ್ ಸೇವೆಗಳು ಏ.1ರಿಂದ ಆರಂಭವಾಗಲಿದೆ ಎಂದರು.</p>.<p>ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ನಿಕಟಪೂರ್ವ ಅಧ್ಯಕ್ಷ ವಿ.ಎಚ್.ಎ. ಶಕೂರ್ ಮಾತನಾಡಿದರು.</p>.<p>ಅಕ್ರಮ ಸಕ್ರಮ ಸಮಿತಿಯ ಸದಸ್ಯ ಮಹಮ್ಮದ್ ಬಡಗನ್ನೂರು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ದ.ಕ. ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಮಹಮ್ಮದ್ ಆಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಭಾಗವಹಿಸಿದ್ದರು.</p>.<p>ಕೆಎಸ್ಆರ್ಟಿಸಿ ಪುತ್ತೂರು ಘಟಕದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ಸ್ವಾಗತಿಸಿದರು. ಸಂಚಾರ ನಿಯಂತ್ರಣಾಧಿಕಾರಿ ವೆಂಕಟರಮಣ ಭಟ್ ವಂದಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-29-1153010803</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>