<p><strong>ಪುತ್ತೂರು</strong>: ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಅಡಿಯಲ್ಲಿ ನಂದಳಿಕೆ ಬಾಲಚಂದ್ರ ರಾವ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ವಿಶೇಷ ಅಂಚೆ ಲಕೋಟೆಯನ್ನು ಗುರುವಾರ ಬಿಡುಗಡೆಗೊಳಿಸಲಾಯಿತು.</p>.<p>ನಂದಳಿಕೆ ಬಾಲಚಂದ್ರ ರಾವ್ ಅವರ ಸಾಮಾಜಿಕ ಅಭಿವೃದ್ಧಿ, ಕವಿ ಮುದ್ದಣನ ನೆನಪಲ್ಲಿ ಮಾಡಿದ ಸಾರಸ್ವತ ಸೇವೆಯ ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಅವರ ಪತ್ನಿ ಎನ್. ವಿಜಯಲಕ್ಷ್ಮಿ ಬಿ. ರಾವ್ ಪ್ರಾಯೋಜಕತ್ವದಲ್ಲಿ ಪುತ್ತೂರು ಅಂಚೆ ವಿಭಾಗದ ಸಹಯೋಗದಲ್ಲಿ ಬಿಡುಗಡೆಗೊಳಿಸಲಾಯಿತು.</p>.<p>ಮುಖ್ಯ ಅತಿಥಿಗಳಾಗಿ ಸಾಹಿತಿ ಬಿ.ಎ. ವಿವೇಕ್ ರೈ, ಹರಿಕೃಷ್ಣ ಪುನರೂರು ಹಾಗೂ ಯಕ್ಷಗಾನ ವಿದ್ವಾಂಸ ಪ್ರೊ.ಪ್ರಭಾಕರ ಜೋಶಿ ಭಾಗವಹಿಸಿದ್ದರು. ಮಂಗಳೂರು ಆರ್.ಎಂ.ಎಸ್. ವಿಭಾಗೀಯ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು.</p>.<p>ಅಂಚೆ ಇಲಾಖೆಯ ಅಧಿಕಾರಿಗಳಾದ ಮೆಲ್ವಿನ್ ಅರುಣ್ ಲೋಬೊ, ಚಂದ್ರ ನಾಯ್ಕ ಎಂ. ಇದ್ದರು. ಸೌಜನ್ಯ ರಾವ್ ನಂದಳಿಕೆ ಪ್ರಾರ್ಥನೆ ಹಾಡಿದರು. ಉದಯೇಶ್ ಕೆದಿಲಾಯ ಕಾರ್ಯಕ್ರಮ ನಿರೂಪಿಸಿದರು.</p>.<p>ಮಾರ್ಗಕ್ಕೆ ನಾಮಕರಣ: ನಂದಳಿಕೆ ಬಾಲಚಂದ್ರ ರಾವ್ ಅವರ ಕನಸಿನಂತೆ ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದಿಂದ ನಂದಳಿಕೆ ಆದಿಲಕ್ಷ್ಮಿ ದೇವಸ್ಥಾನದವರೆಗಿನ ಜಾಗವನ್ನು ಮಾರ್ಗಕ್ಕೆ ನೀಡಿದ್ದು, ಈ ಮಾರ್ಗಕ್ಕೆ ನಂದಳಿಕೆ ಮೂಡುಮನೆಯ ‘ಎನ್. ಸುಬ್ಬರಾವ್ - ಡಾ. ಎನ್.ವಿ. ರಾವ್ ಮಾರ್ಗ’ ಎಂದು ಹೆಸರಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.</p>.<p>ನಂದಳಿಕೆ ಬಾಲಚಂದ್ರ ರಾವ್ ಅವರ ಸವಿನೆನಪಿಗಾಗಿ ನಾಮಫಲಕ ಅನಾವರಣ ಮಾಡಲಾಯಿತು. ಎನ್. ಶ್ರೀಕಾಂತ ಭಟ್, ನಂದಳಿಕೆ ಚಾವಡಿ ಅರಮನೆಯ ಎನ್. ಸುಹಾಸ ಹೆಗ್ಡೆ ಹಾಗೂ ಎನ್. ಶೋಭಾ ಹೆಗ್ಡೆ ಅನಾವರಣಗೊಳಿಸಿದರು. ನಂದಳಿಕೆ ಮೂಡುಮನೆಯ ಕುಟುಂಬಸ್ಥರು, ಬಂಧು ಮಿತ್ರರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-29-1825435679</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುತ್ತೂರು</strong>: ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಅಡಿಯಲ್ಲಿ ನಂದಳಿಕೆ ಬಾಲಚಂದ್ರ ರಾವ್ ಅವರ ಮೊದಲ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ವಿಶೇಷ ಅಂಚೆ ಲಕೋಟೆಯನ್ನು ಗುರುವಾರ ಬಿಡುಗಡೆಗೊಳಿಸಲಾಯಿತು.</p>.<p>ನಂದಳಿಕೆ ಬಾಲಚಂದ್ರ ರಾವ್ ಅವರ ಸಾಮಾಜಿಕ ಅಭಿವೃದ್ಧಿ, ಕವಿ ಮುದ್ದಣನ ನೆನಪಲ್ಲಿ ಮಾಡಿದ ಸಾರಸ್ವತ ಸೇವೆಯ ನೆನಪಿನಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಅವರ ಪತ್ನಿ ಎನ್. ವಿಜಯಲಕ್ಷ್ಮಿ ಬಿ. ರಾವ್ ಪ್ರಾಯೋಜಕತ್ವದಲ್ಲಿ ಪುತ್ತೂರು ಅಂಚೆ ವಿಭಾಗದ ಸಹಯೋಗದಲ್ಲಿ ಬಿಡುಗಡೆಗೊಳಿಸಲಾಯಿತು.</p>.<p>ಮುಖ್ಯ ಅತಿಥಿಗಳಾಗಿ ಸಾಹಿತಿ ಬಿ.ಎ. ವಿವೇಕ್ ರೈ, ಹರಿಕೃಷ್ಣ ಪುನರೂರು ಹಾಗೂ ಯಕ್ಷಗಾನ ವಿದ್ವಾಂಸ ಪ್ರೊ.ಪ್ರಭಾಕರ ಜೋಶಿ ಭಾಗವಹಿಸಿದ್ದರು. ಮಂಗಳೂರು ಆರ್.ಎಂ.ಎಸ್. ವಿಭಾಗೀಯ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು.</p>.<p>ಅಂಚೆ ಇಲಾಖೆಯ ಅಧಿಕಾರಿಗಳಾದ ಮೆಲ್ವಿನ್ ಅರುಣ್ ಲೋಬೊ, ಚಂದ್ರ ನಾಯ್ಕ ಎಂ. ಇದ್ದರು. ಸೌಜನ್ಯ ರಾವ್ ನಂದಳಿಕೆ ಪ್ರಾರ್ಥನೆ ಹಾಡಿದರು. ಉದಯೇಶ್ ಕೆದಿಲಾಯ ಕಾರ್ಯಕ್ರಮ ನಿರೂಪಿಸಿದರು.</p>.<p>ಮಾರ್ಗಕ್ಕೆ ನಾಮಕರಣ: ನಂದಳಿಕೆ ಬಾಲಚಂದ್ರ ರಾವ್ ಅವರ ಕನಸಿನಂತೆ ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದಿಂದ ನಂದಳಿಕೆ ಆದಿಲಕ್ಷ್ಮಿ ದೇವಸ್ಥಾನದವರೆಗಿನ ಜಾಗವನ್ನು ಮಾರ್ಗಕ್ಕೆ ನೀಡಿದ್ದು, ಈ ಮಾರ್ಗಕ್ಕೆ ನಂದಳಿಕೆ ಮೂಡುಮನೆಯ ‘ಎನ್. ಸುಬ್ಬರಾವ್ - ಡಾ. ಎನ್.ವಿ. ರಾವ್ ಮಾರ್ಗ’ ಎಂದು ಹೆಸರಿಸಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.</p>.<p>ನಂದಳಿಕೆ ಬಾಲಚಂದ್ರ ರಾವ್ ಅವರ ಸವಿನೆನಪಿಗಾಗಿ ನಾಮಫಲಕ ಅನಾವರಣ ಮಾಡಲಾಯಿತು. ಎನ್. ಶ್ರೀಕಾಂತ ಭಟ್, ನಂದಳಿಕೆ ಚಾವಡಿ ಅರಮನೆಯ ಎನ್. ಸುಹಾಸ ಹೆಗ್ಡೆ ಹಾಗೂ ಎನ್. ಶೋಭಾ ಹೆಗ್ಡೆ ಅನಾವರಣಗೊಳಿಸಿದರು. ನಂದಳಿಕೆ ಮೂಡುಮನೆಯ ಕುಟುಂಬಸ್ಥರು, ಬಂಧು ಮಿತ್ರರು ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-29-1825435679</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>