ಬೆಂಗಳೂರಿನ ಸ್ಟ್ರಕ್ ಜಿಯೊಟೆಕ್ ಸಂಶೋಧನಾ ಪ್ರಯೋಗಾಲಯದ ವ್ಯವಸ್ಥಾಪಕ ನಿರ್ದೇಶಕ ಆರ್.ಕೆ. ಜೈಗೋಪಾಲ್ ಅವರ ಸಲಹೆಯಂತೆ ಲೋಕೋಪಯೋಗಿ ಇಲಾಖೆಯು ಈ ಕಾರ್ಯವನ್ನು ಕೈಗೆತ್ತಿಕೊಂಡಿತ್ತು. ಆರಂಭದಲ್ಲಿ ಸೇತುವೆಯ ಪಿಲ್ಲರ್ನ ಅಡಿಯಲ್ಲಿ ಕಲ್ಲು, ಮರಳಿನ ಚೀಲಗಳನ್ನು ಇಟ್ಟು, ಭದ್ರತೆ ಒದಗಿಸಲಾಗಿತ್ತು. ಜೊತೆಗೆ ನದಿ ನೀರಿನ ಹರಿವನ್ನು ತಿರುಗಿಸಲಾಗಿತ್ತು.