<p><strong>ಮಂಗಳೂರು</strong>: ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಮನವಮಿಗೆ ಸರ್ಕಾರಿ ರಜೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಏಕಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು. </p>.<p>ವಿಶ್ವ ಹಿಂದೂ ಪರಿಷತ್ ಮಂಗಳೂರು ಘಟಕ ಮತ್ತು ರಾಮೋತ್ಸವ ಸಮಿತಿ ನಗರದಲ್ಲಿ ಆಯೋಜಿಸಿರುವ ರಾಮೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಮನವಮಿಗೂ ರಜೆ ಬೇಕು. ಅದನ್ನು ತುಳುನಾಡಿನ ಶಾಸಕರೆಲ್ಲರ ಜೊತೆ ವಿಧಾನಸೌದದಲ್ಲಿ ಪ್ರಸ್ತಾಪಿಸುವೆ ಎಂದು ಹೇಳಿದರು.</p>.<p>ದೇಶದ ಹಿತಕ್ಕೆ ಸಂಬಂಧಿಸಿ ಶ್ರೀರಾಮನ ಕೊಡುಗೆ ದೊಡ್ಡದು. ರಾಮನ ಹೆಸರಿನ ಹಬ್ಬಕ್ಕೆ ಮುಂದಿನ ವರ್ಷವೇ ರಜೆ ಘೋಷಣೆ ಮಾಡುವಂತೆ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು. </p>.<p>ಸಭೆಯನ್ನು ಉದ್ಘಾಟಿಸಿದ ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಸತೀಶ್ಚಂದ್ರ ಎಸ್ ಆರ್ ಈಚಿನ ಒಂದೂವರೆ ದಶಕದಲ್ಲಿ ಭಾರತಲ್ಲಿ ಬದಲಾವಣೆಗಳಾಗಿದ್ದು ವಿಶ್ವದ ಎದುರು ಜಯದ ಹಾದಿಯಲ್ಲಿ ಸಾಗುತ್ತಿದೆ. ಆದರೂ ಪಠ್ಯಪುಸ್ತಕದಲ್ಲಿ ರಾಮಾಯಣ ಇಲ್ಲದೇ ಇರುವುದು ಬೇಸರದ ವಿಷಯ ಎಂದರು.</p>.<p>ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್ ಮಾತನಾಡಿ ಜಗತ್ತನ್ನೇ ಕುಟುಂಬ ಎಂದು ನಂಬುವ ದೇಶದಲ್ಲಿ ದ್ವೇಷ ಉಂಟಾಗಲು ಸಾಧ್ಯವಿಲ್ಲ. ಮುಂದೊಂದು ದಿನ ವಿಶ್ವಕ್ಕೇ ಶಾಂತಿಯ ಪಾಠ ಮಾಡಲು ಭಾರತಕ್ಕೆ ಮಾತ್ರ ಸಾಧ್ಯ ಎಂದರು.</p>.<p>ಭಾರತ ನಾಶವಾದರೆ ಜಗತ್ತೇ ಮುಗಿದಂತೆ. ಭಾರತ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು. ಶಾಂತಿಯ ಸಂದೇಶ ಸಾರಲು ಹಿಂದೂ ಧರ್ಮ ಬೇಕು. ಕತ್ತಿಯ ಅಲಗಿನಿಂದ ಅಧಿಕಾರ ಹಿಡಿದ ಧರ್ಮದಿಂದ ಶಾತಿಮಂತ್ರ ಪಠಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.</p>.<p>ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಬಿ ಪುರಾಣಿಕ್, ಪ್ರಮುಖರಾದ ಮೋನಪ್ಪ ಭಂಡಾರಿ, ಜಗದೀಶ ಶೇಣವ, ಪುಷ್ಪಲತಾ, ಸುನಿಲ್ ಆಚಾರ್ಯ, ಡಾ.ಅಪೂರ್ವ ಜಯದೇವ, ಎಚ್.ಕೆ ಪುರುಷೋತ್ತಮ, ದಿಲ್ರಾಜ್ ಆಳ್ವ, ಶಿವಪ್ಪ ನಂತೂರು, ಜಗದೀಪ್ ಸುವರ್ಣ, ಅಕ್ಷಿತ್ ಸುವರ್ಣ, ದಿವಾಕರ ಪಾಂಡೇಶ್ವರ, ಶ್ರೀಧರ ಶೆಟ್ಟಿ ಪುಳಿಂಚ, ಜನಾರ್ದನ ಅರ್ಕುಳ, ಲೋಕೇಶ್ ಬೋಳಾರ, ಗುರುಪ್ರಸಾದ್ ಪಾಲ್ಗೊಂಡಿದ್ದರು. ಶಿವಾನಂದ ಮೆಂಡನ್ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು</strong>: ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಮನವಮಿಗೆ ಸರ್ಕಾರಿ ರಜೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಏಕಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದರು. </p>.<p>ವಿಶ್ವ ಹಿಂದೂ ಪರಿಷತ್ ಮಂಗಳೂರು ಘಟಕ ಮತ್ತು ರಾಮೋತ್ಸವ ಸಮಿತಿ ನಗರದಲ್ಲಿ ಆಯೋಜಿಸಿರುವ ರಾಮೋತ್ಸವದ ಅಂಗವಾಗಿ ಶುಕ್ರವಾರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಮನವಮಿಗೂ ರಜೆ ಬೇಕು. ಅದನ್ನು ತುಳುನಾಡಿನ ಶಾಸಕರೆಲ್ಲರ ಜೊತೆ ವಿಧಾನಸೌದದಲ್ಲಿ ಪ್ರಸ್ತಾಪಿಸುವೆ ಎಂದು ಹೇಳಿದರು.</p>.<p>ದೇಶದ ಹಿತಕ್ಕೆ ಸಂಬಂಧಿಸಿ ಶ್ರೀರಾಮನ ಕೊಡುಗೆ ದೊಡ್ಡದು. ರಾಮನ ಹೆಸರಿನ ಹಬ್ಬಕ್ಕೆ ಮುಂದಿನ ವರ್ಷವೇ ರಜೆ ಘೋಷಣೆ ಮಾಡುವಂತೆ ಹೋರಾಟ ಮಾಡಲಾಗುವುದು ಎಂದು ಅವರು ಹೇಳಿದರು. </p>.<p>ಸಭೆಯನ್ನು ಉದ್ಘಾಟಿಸಿದ ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಸತೀಶ್ಚಂದ್ರ ಎಸ್ ಆರ್ ಈಚಿನ ಒಂದೂವರೆ ದಶಕದಲ್ಲಿ ಭಾರತಲ್ಲಿ ಬದಲಾವಣೆಗಳಾಗಿದ್ದು ವಿಶ್ವದ ಎದುರು ಜಯದ ಹಾದಿಯಲ್ಲಿ ಸಾಗುತ್ತಿದೆ. ಆದರೂ ಪಠ್ಯಪುಸ್ತಕದಲ್ಲಿ ರಾಮಾಯಣ ಇಲ್ಲದೇ ಇರುವುದು ಬೇಸರದ ವಿಷಯ ಎಂದರು.</p>.<p>ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್ ಮಾತನಾಡಿ ಜಗತ್ತನ್ನೇ ಕುಟುಂಬ ಎಂದು ನಂಬುವ ದೇಶದಲ್ಲಿ ದ್ವೇಷ ಉಂಟಾಗಲು ಸಾಧ್ಯವಿಲ್ಲ. ಮುಂದೊಂದು ದಿನ ವಿಶ್ವಕ್ಕೇ ಶಾಂತಿಯ ಪಾಠ ಮಾಡಲು ಭಾರತಕ್ಕೆ ಮಾತ್ರ ಸಾಧ್ಯ ಎಂದರು.</p>.<p>ಭಾರತ ನಾಶವಾದರೆ ಜಗತ್ತೇ ಮುಗಿದಂತೆ. ಭಾರತ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು. ಶಾಂತಿಯ ಸಂದೇಶ ಸಾರಲು ಹಿಂದೂ ಧರ್ಮ ಬೇಕು. ಕತ್ತಿಯ ಅಲಗಿನಿಂದ ಅಧಿಕಾರ ಹಿಡಿದ ಧರ್ಮದಿಂದ ಶಾತಿಮಂತ್ರ ಪಠಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.</p>.<p>ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಬಿ ಪುರಾಣಿಕ್, ಪ್ರಮುಖರಾದ ಮೋನಪ್ಪ ಭಂಡಾರಿ, ಜಗದೀಶ ಶೇಣವ, ಪುಷ್ಪಲತಾ, ಸುನಿಲ್ ಆಚಾರ್ಯ, ಡಾ.ಅಪೂರ್ವ ಜಯದೇವ, ಎಚ್.ಕೆ ಪುರುಷೋತ್ತಮ, ದಿಲ್ರಾಜ್ ಆಳ್ವ, ಶಿವಪ್ಪ ನಂತೂರು, ಜಗದೀಪ್ ಸುವರ್ಣ, ಅಕ್ಷಿತ್ ಸುವರ್ಣ, ದಿವಾಕರ ಪಾಂಡೇಶ್ವರ, ಶ್ರೀಧರ ಶೆಟ್ಟಿ ಪುಳಿಂಚ, ಜನಾರ್ದನ ಅರ್ಕುಳ, ಲೋಕೇಶ್ ಬೋಳಾರ, ಗುರುಪ್ರಸಾದ್ ಪಾಲ್ಗೊಂಡಿದ್ದರು. ಶಿವಾನಂದ ಮೆಂಡನ್ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>