ಮಂಗಳೂರು ತಾಲ್ಲೂಕು ಕಂದಾವರ ಗ್ರಾಮದ ಅಬ್ದುಲ್ ಲತೀಫ್ (42) ಶಿಕ್ಷೆಗೊಳಗಾದ ವ್ಯಕ್ತಿ. ತೆಂಕ ಉಳಿಪಾಡಿ ಗ್ರಾಮದ ಕೈಕಂಬದಲ್ಲಿ ಬಟ್ಟೆ ಅಂಗಡಿ ಹೊಂದಿದ್ದ ಅಬ್ದುಲ್ ಲತೀಫ್, ಅಂಗಡಿ ಕೆಲಸಕ್ಕೆ ಬಂದಿದ್ದ 17 ವರ್ಷದ ಬಾಲಕಿ ತಲೆನೋವು ಎಂದು ಹೇಳಿದಾಗ, ಔಷಧ ತರುವುದಾಗಿ ಹೇಳಿ, ಜ್ಯೂಸ್ ಜತೆ ಮಾತ್ರೆಯನ್ನು ತಂದು ಕೊಟ್ಟಿದ್ದ. ಇದನ್ನು ಸೇವಿಸಿದ ಬಾಲಕಿ ಪ್ರಜ್ಞೆ ತಪ್ಪಿದ್ದಳು. ಆ ವೇಳೆ ಅತ್ಯಾಚಾರ ನಡೆಸಿದ ಅಬ್ದುಲ್, ಇದನ್ನು ಯಾರಿಗೂ ಹೇಳಬಾರದೆಂದು ಹೇಳಿದ್ದ. ಎಲ್ಲವನ್ನೂ ವಿಡಿಯೊ ಮಾಡಿದ್ದು, ಯಾರ ಬಳಿಯಾದರೂ ಹೇಳಿದರೆ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.