ದೇವರು, ಗುರುಗಳು ಮತ್ತು ಶಾಸ್ತ್ರದ ಆರಾಧನೆಯೊಂದಿಗೆ ನಿತ್ಯವೂ ಜಪ, ತಪ, ಧ್ಯಾನ, ಸ್ವಾಧ್ಯಾಯ ಮಾಡುವುದರಿಂದ ಅಕ್ಷಯ ಸುಖವನ್ನೀಯುವ ಮೋಕ್ಷ ಪ್ರಾಪ್ತಿಯಾಗುತ್ತದೆ. ‘ರತ್ನಕರಂಡಕ ಶ್ರಾವಕಾಚಾರ’ ಅಮೂಲ್ಯ ಕೃತಿಯಾಗಿದ್ದು ಸಾರ್ಥಕ ಬದುಕಿಗೆ ದಾರಿದೀಪವಾಗಿದೆ. ಆತ್ಮಕಲ್ಯಾಣದೊಂದಿಗೆ ದೈನಂದಿನ ಜೀವನದಲ್ಲಿ ಆಚಾರ-ವಿಚಾರ, ನೀತಿ, ನಿಯಮ, ಶಾಂತಿ, ಕ್ಷಮೆ, ವಿವೇಕ, ಆಚಾರ ಸಂಹಿತೆ ಇತ್ಯಾದಿಗಳ ಬಗ್ಯೆ ಉಪಯುಕ್ತ ಮಾಹಿತಿ-ಮಾರ್ಗದರ್ಶನವಿದೆ ಎಂದರು.