ಬದಿಯಡ್ಕ : ಕಾಸರಗೋಡಿನ ಮಲೆನಾಡು, ಕರಾವಳಿ ಹಾಗೂ ಗ್ರಾಮೀಣ ಪ್ರದೇಶಗಳ ಸಂಪರ್ಕ ವ್ಯವಸ್ಥೆ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ' ಎಂದು ಕೇರಳ ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ ಜಿ ಸುಧಾಕರನ್ ಹೇಳಿದರು.
ನೀರ್ಚಾಲು-ಕಾಸರಗೋಡು ಮೆಕ್ಡಾಂ ಡಾಮರೀಕರಣ ಹಾಗೂ ನೂತನವಾಗಿ ನಿರ್ಮಿಸಿದ ಕೊರತ್ತಿಗುಳಿ ಸೇತುವೆಯನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕೆಲಸಗಳು ಆಗಸ್ಟ್ ತಿಂಗಳಿಂದ ಆರಂಭವಾಗಲಿದೆ. ಅದು ಕಾಸರಗೋಡು ಜಿಲ್ಲೆಯಿಂದ ಆರಂಭವಾಗಲಿದೆ. ಜಿಲ್ಲೆಯಲ್ಲಿ ಹಾದು ಹೋಗುವ ಸುಮಾರು 80 ಕಿ.ಮೀ. ರಸ್ತೆ ವಿಸ್ತರಣೆಗೆ ₹4300 ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆಯ ಉತ್ತರ ವಿಭಾಗ ಎಂಜಿನಿಯರ್ ವಿ ಕೆ ಮಿನಿ , ಮಧೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿವಾಕರ ಆಚಾರ್ಯ, ಮುಖಂಡರಾದ ಎ ಎಸ್ ಮೊಹಮ್ಮದ್, ಪ್ರಭಾಕರ ರೈ, ಮಾಹಿನ್ ಕೇಳೋಟ್, ಪ್ರೇಮ ಕುಮಾರಿ, ಎಂ ಎಚ್ ಜನಾರ್ದನ , ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ಇದ್ದರು.