ನೆಲ್ಯಾಡಿಯಲ್ಲಿ ಲಾರಿ-ಬೊಲೆರೋ ಜೀಪ್ ಅಪಘಾತ:ಉಪ್ಪಿನಂಗಡಿ ಸಮೀಪದ ರಾಷ್ಟ್ರಿಯ ಹೆದ್ದಾರಿ 75ರಲ್ಲಿ ನೆಲ್ಯಾಡಿಯಲ್ಲಿ ಸೋಮವಾರ ತಡ ರಾತ್ರಿ ಲಾರಿ ಮತ್ತು ಬೊಲೆರೋ ಡಿಕ್ಕಿಯಾಗಿ ಬೊಲೆರೋದಲ್ಲಿದ್ದ 3 ಮಂದಿ ಮೃತಪಟ್ಟಿದ್ದಾರೆ. ನೆಲ್ಯಾಡಿ ಪರಿಸರ ನಿವಾಸಿಗಳಾದ ಅಬ್ದುಲ್ ಸತ್ತಾರ್, ಶೈಲೇಶ್, ಶ್ಯಾಂಸನ್ ಮೃತಪಟ್ಟಿದ್ದಾರೆ. ಉಪ್ಪಿನಂಗಡಿ ಮತ್ತು ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.