ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ದಕ್ಷಿಣ ಕನ್ನಡ ಭೇಟಿ: ಡಿಸಿಎಂ ಪರಮೇಶ್ವರ

ನಿರ್ಮಲಾನಂದ ಶ್ರೀ ಭೇಟಿ
Last Updated 30 ಮೇ 2018, 5:53 IST
ಅಕ್ಷರ ಗಾತ್ರ

ಬೆಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮಳೆ ವಿಚಾರವು ಇವತ್ತಿನ ಸಂಪುಟ ಸಭೆಯಲ್ಲಿ  ಚರ್ಚೆ ಆಗಲಿದೆ. ನಾನು ಇಂದು ದಕ್ಷಿಣ ಕನ್ನಡಕ್ಕೆ ಭೇಟಿ ನೀಡಲಿದ್ದೇನೆ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.

ಬುಧವಾರ ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಭೇಟಿ ಬಳಿಕ ಮಾತನಾಡಿದರು. 

ಪರಿಷತ್‌ಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಬಿ ಫಾರಂ ಸಿದ್ಧವಿದೆ. ಇಂದೇ ಎಲ್ಲವೂ ಅಂತಿಮ ಆಗಲಿದೆ’ ಎಂದರು.

‘ನಮ್ಮ ತಂದೆಯ ಕಾಲದಿಂದಲೂ ಮಠದ ಜೊತೆ ಒಡನಾಟ ಹೆಚ್ಚು. ಡಿಸಿಎಂ ಆದ ಬಳಿಕ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ. ರಾಜ್ಯದಲ್ಲಿ ಉತ್ತಮ ಆಡಳಿತ ಕೊಡಬೇಕು ಎಂಬುದು ಶ್ರೀಗಳ ಆಶಯವೂ ಆಗಿದೆ. ಸಂಪುಟ ರಚನೆ ಸದ್ಯದಲ್ಲೇ ಆಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT