ಸಂದೀಪ್ ಪಾಟೀಲ್ ಬಳ್ಳಾರಿ, ಕೊಡಗು, ದಾವಣಗೆರೆ, ಬೆಳಗಾವಿ ಎಸ್ ಪಿಯಾಗಿ, ಬೆಂಗಳೂರು ನಗರ ದ ಉತ್ತರ ಮತ್ತು ಕೇಂದ್ರ ಉಪ ವಿಭಾಗಗಳ ಡಿಸಿಪಿಯಾಗಿ, ಗುಪ್ತದಳದ ಎಸ್ ಪಿಯಾಗಿ ಕೆಲಸ ಮಾಡಿದ್ದಾರೆ. ಡಿಐಜಿಯಾಗಿ ಬಡ್ತಿ ಹೊಂದಿದ ಬಳಿಕ ರಾಜ್ಯ ಮೀಸಲು ಪೊಲೀಸ್ ಪಡೆ ಮತ್ತು ಬೆಂಗಳೂರು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಡಿಐಜಿಯಾಗಿದ್ದರು.
2003ರ ವೃಂದದ ಐಪಿಎಸ್ ಅಧಿಕಾರಿಯಾಗಿರುವ ಟಿ.ಆರ್.ಸುರೇಶ್ 2017ರ ಜೂನ್ 12ರಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಹುದ್ದೆಯ ಅಧಿಕಾರ ವಹಿಸಿಕೊಂಡಿದ್ದರು. ವಿಧಾನಸಭೆ ಚುನಾವಣೆ ಪ್ರಯುಕ್ತ 2018ರ ಏಪ್ರಿಲ್ 18ರಿಂದ ಜೂನ್ 18ರವರೆಗೆ ಬೇರೆಡೆ ವರ್ಗಾವಣೆ ಮಾಡಲಾಗಿತ್ತು. 2018ರ ಜೂನ್ 18ರಂದು ಮತ್ತೆ ಅಧಿಕಾರ ಸ್ವೀಕರಿಸಿದ್ದರು.