ಕರ್ನಾಟಕದಲ್ಲಿ 4 ಸಾವಿರ ಹಿಂದೂ ಮಠಗಳು ಮತ್ತು 27 ಸಾವಿರ ಸನ್ಯಾಸಿಗಳಿದ್ದು, ಪ್ರತಿ ಮಠಗಳಿಗೆ ಸಂತ ಸಮಿತಿಯ ಪ್ರತಿನಿಧಿಗಳು ಭೇಟಿ ನೀಡುತ್ತಿದ್ದಾರೆ. 9 ಜಿಲ್ಲೆಗಳಲ್ಲಿ ಮಠಗಳ ಭೇಟಿ ಕಾರ್ಯ ಮುಕ್ತಾಯಗೊಂಡಿದೆ. ರಥ ಯಾತ್ರೆ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಯೋಜನೆ ಇದೆ ಎಂದು ಅವರು ತಿಳಿಸಿದರು.