ದೇವಾಲಯದಲ್ಲಿ ಕಡಂಬು ಮನೆಯ ಅನುವಂಶೀಯ ಆಡಳಿತವಿದೆ. ರಂಗನಾಥ ನೂರಿತ್ತಾಯ ಅರ್ಚಕರು. ಅವರ ಅಣ್ಣ ಸುಬ್ರಹ್ಮಣ್ಯ ನೂರಿತ್ತಾಯರು ಮೊಕ್ತೇಸರರು. ಇನ್ನೊಬ್ಬ ಅಣ್ಣ ರತ್ನಾಕರ ನೂರಿತ್ತಾಯರು ಅರ್ಚಕರಾಗಿ ನೆರವಾಗುತ್ತಾರೆ. ದೇವಾಲಯ ನಿರ್ಮಾಣಕ್ಕೆ ಉದ್ಯಮಿ ರಮಾನಂದ ಸಾಲಿಯಾನ್ ಶಾಶ್ವತ ರೂಪು ನೀಡಿದ್ದಾರೆ. ಡಿಸೆಂಬರ್ ಕೊನೆ ಅಥವಾ ಜನವರಿ ತಿಂಗಳ ಆದಿಯಲ್ಲಿ ಬರುವ ಕಿರು ಷಷ್ಠಿಯ ದಿನ ಪ್ರತಿಷ್ಠಾ ವರ್ಧಂತಿ ನಡೆಯುತ್ತದೆ. ಅಂದು ಗಣಪತಿ ಯಾಗ, ದುರ್ಗಾ ಪೂಜೆ, ವಿಶೇಷ ಬಲಿ ಉತ್ಸವಗಳು ನಡೆಯುತ್ತವೆ. ಆಗ, ಅದ್ದೂರಿಯ ಉತ್ಸವದ ಎಲ್ಲ ಏರ್ಪಾಡುಗಳನ್ನು ಮಾಡುವವರು ಪದ್ಮ ನಾಯ್ಕ್, ಶರತ್ ಕುಮಾರ್ ಮೊದಲಾದ ಭಕ್ತ ವೃಂದ.