‘ಗ್ರಾಮೀಣ ಪ್ರದೇಶಗಳಲ್ಲಿ ನದಿಗಳಿಗೆ ಸೇತುವೆ ಇಲ್ಲದ ಕಾರಣ ಜನರು ಸಮಸ್ಯೆ ಎದುರಿಸುತ್ತಿರುವುದು ನನ್ನನ್ನು ಕಾಡುತ್ತಿತ್ತು. ಅವರಿಗಾಗಿ ಏನಾದರೂ ಮಾಡಬೇಕೆಂಬ ತುಡಿತವಿತ್ತು. ಕಡಿಮೆ ಖರ್ಚಿನಲ್ಲಿ, ಗುಣಮಟ್ಟದ ಹಾಗೂ ದೀರ್ಘಕಾಲ ಬಾಳಿಕೆ ಬರುವ ತೂಗುಸೇತುವೆ ನಿರ್ಮಿಸುವ ಮಾದರಿಯನ್ನು ರೂಪಿಸಿದೆ. ತಂದೆಯವರ ಸಲಹೆ ಮೇರೆಗೆ ಇದಕ್ಕಾಗಿ ಕಾರ್ಯಾಗಾರವನ್ನು ಸ್ಥಾಪಿಸಿದೆ’ ಎಂದು ಅವರು ಜೀವನಾನುಭವ ಹಂಚಿಕೊಂಡರು.