ಮೃತ ಯುವಕನನ್ನು ಮಾಲೇಮಾರ್ ಯತೀಶ್ ಅವರ ಪುತ್ರ ಆತಿಶ್ (20) ಎಂದು ಗುರುತಿಸಲಾಗಿದೆ. ಆತಿಶ್ ಅವರು ನಂತೂರು ಜಂಕ್ಷನ್ ಕಡೆಯಿಂದ ಬಿಕರ್ನಕಟ್ಟೆ ಕೈಕಂಬ ಕಡೆಗೆ ಹಾದು ಹೋಗಿರುವ ಹೆದ್ದಾರಿಯಲ್ಲಿ ಸ್ಕೂಟರ್ನಲ್ಲಿ ಶುಕ್ರವಾರ ಸಂಜೆ ಸಾಗುತ್ತಿದ್ದರು. ಬಿಕರ್ನಕಟ್ಟೆ ಕಂಡೆಟ್ಟು ಕ್ರಾಸ್ಗಿಂತ ಸ್ವಲ್ಪ ಮೊದಲು ಸಿಗುವ ‘ಮರಿಯನ್ ಪ್ಯಾರಡೈಸ್ ಅವೆನ್ಯೂ’ ವಾಣಿಜ್ಯ ಕಟ್ಟಡದ ಎದುರು ಸಾಗುವಾಗ ರಸ್ತೆಯಲ್ಲಿದ್ದ ಹೊಂಡವನ್ನು ತಪ್ಪಿಸುವ ಭರದಲ್ಲಿ ಸ್ಕೂಟರ್ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು. ಮಳೆ ಬರುತ್ತಿದ್ದುದರಿಂದ ಹೆದ್ದಾರಿಯಲ್ಲಿ ಹೊಂಡ ಇದ್ದುದು ಸವಾರನ ಗಮನಕ್ಕೆ ಬಂದಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.