ಎಸ್ಡಿಆರ್ಎಫ್ಗೆ ಕೆಎಸ್ಆರ್ಪಿ ಮತ್ತು ಆಂತರಿಕ ಭದ್ರತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸುವುದು ಅಗತ್ಯವಾಗಿದೆ. ಆದರೆ, ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆ, ಗೃಹ ರಕ್ಷಕ ದಳ ಹಾಗೂ ಪೌರ ರಕ್ಷಣಾ ಪಡೆಯ ತಲಾ 25 ಜನರನ್ನು ಎಸ್ಡಿಆರ್ಎಫ್ಗೆ ನಿಯೋಜಿಸಲಾಗಿದೆ. ಮಂಗಳೂರಿನಲ್ಲಿ ನಿಯೋಜನೆಗೊಂಡ 25 ಜನರಿಗೆ ತರಬೇತಿಯನ್ನೂ ನೀಡಲಾಗಿದೆ ಎಂದು ಯುನೂಸ್ ಅಲಿ ಕೌಸರ್ ಮಾಹಿತಿ ನೀಡಿದರು.