ವಿಮರ್ಶಕ ಒ.ಎಲ್.ನಾಗಭೂಷಣಸ್ವಾಮಿ, ’ಭಾರತದ ಚಿಂತನೆಯಲ್ಲಿ ಸರ್ವೋದಯ ಸಮನ್ವಯ, ಮನುಷ್ಯ ಸಮಾನ ಎಂಬ ಕಲ್ಪನೆ ಇರಲಿಲ್ಲ. ನಮ್ಮಲ್ಲಿ ಎಲ್ಲ ಕಾಲವೂ ಸಮಾನ ಎಂಬುದು ಇರಲಿಲ್ಲ. ಕೆಲವು ಕಾಲ ಒಳ್ಳೆಯದು. ಕೆಲವು ಕಾಲ ಕೆಟ್ಟದ್ದು. ಒಬ್ಬ ಮನುಷ್ಯ ಕೊಲೆ ಮಾಡಿದರೆ ಶಿಕ್ಷೆ ಎಂಬುದಿದೆ. ಆದರೆ ಭಾರತದ ಧರ್ಮಶಾಸ್ತ್ರದಲ್ಲಿ ಇದು ವ್ಯತಿರಿಕ್ತ. ಕೊಲೆ ಆರೋಪ ಹೊತ್ತವ ಬ್ರಾಹ್ಮಣನಾದರೆ ಬೇರೆ ಶಿಕ್ಷೆ, ವೈಶ್ಯ, ಕ್ಷತ್ರಿಯ, ಶೂದ್ರರಿಗೆ ಬೇರೆ ಶಿಕ್ಷೆ ಇತ್ತು’ ಎಂದರು.