ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದ ಹುಕ್ಲಮಕ್ಕಿಯ ಗೋಪಾಲಕೃಷ್ಣ ಹೆಗಡೆ, ‘ಶೇಣಿಯವರ ಅರ್ಥಗಾರಿಕೆಯಲ್ಲಿ ಅದ್ವೈತವನ್ನು ಗುರುತಿಸಿದ ವ್ಯಕ್ತಿತ್ವ ಜಿ.ಎಲ್.ಹೆಗಡೆ’ ಎಂದರು. ಟ್ರಸ್ಟ್ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ‘ಯಕ್ಷಗಾನವನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಕೆಲಸದಲ್ಲಿ ಟ್ರಸ್ಟ್ ತನ್ನ ಪ್ರಯತ್ನ ಮಾಡುತ್ತಿದೆ’ ಎಂದರು.