ತಕ್ಷಣವೇ ಎನ್ಎಂಪಿಟಿ ಅಧಿಕಾರಿಗಳು ಹೆಚ್ಚುವರಿ ಪಂಪ್ಗಳು, ಬಾರ್ಜ್ಗಳು ಮತ್ತು ಟಗ್ಗಳೊಂದಿಗೆ ಡ್ರೆಜ್ಜರ್ ಏರಿದ್ದರು. ನೌಕೆಯ ತಳಭಾಗಕ್ಕೆ ಹಾನಿಯಾಗಿರುವುದು ಪರಿಶೀಲನೆ ವೇಳೆ ಕಂಡುಬಂತು. ಆಳ ಸಮುದ್ರದಲ್ಲಿ ಅದನ್ನು ನಿಲ್ಲಿಸಿದರೆ ಮುಳುಗಿ, ತೈಲ ಸೋರಿಕೆ ಉಂಟಾಗುವ ಅಪಾಯವಿದೆ ಎಂಬುದನ್ನು ಗಮನಿಸಲಾಯಿತು. ಈ ಕಾರಣದಿಂದ ನೌಕೆಯನ್ನು ಬೀಚ್ ಪ್ರದೇಶಕ್ಕೆ ಎಳೆದು ತರಲು ನಿರ್ಧರಿಸಲಾಯಿತು. ಅದರಂತೆ ಸುರತ್ಕಲ್ ಕಡಲ ತೀರಕ್ಕೆ ಎಳೆದು ತಂದು ನಿಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.